Advertisement

ಬಾಣಸಿಗರಾಗಲು ಮುಂದಾದ ಪದವೀಧರರು

02:44 PM Jul 06, 2017 | Team Udayavani |

ಬಳ್ಳಾರಿ: ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ ಕರೆದಿರುವ ಗ್ರೂಪ್‌ ಡಿ ಹುದ್ದೆಗಳಿಗೆ ನೇರ ನೇಮಕಾತಿಗೆ ಇಂಜಿನಿಯರ್‌, ಸ್ನಾತಕೋತ್ತರ ಪದವೀಧರರೇ ಹೆಚ್ಚಾಗಿ ಅರ್ಜಿ ಹಾಕಿದ್ದಾರೆ.

Advertisement

ಇದರಲ್ಲಿ ಅರ್ಧದಷ್ಟು ಪದವೀಧರರೇ ಅರ್ಜಿ ಹಾಕಿರುವುದು ಬಳ್ಳಾರಿ ಜಿಲ್ಲೆಯಲ್ಲಿ ಕಂಡು ಬಂದಿದೆ. ನಗರದ ಬಸವ ಭವನದಲ್ಲಿ ನಡೆದ ಪ್ರಾಯೋಗಿಕ ಅಡುಗೆ ತಯಾರಿ ಪರೀಕ್ಷೆಯಲ್ಲಿ ಭಾಗಿಯಾದವರ ವಿದ್ಯಾರ್ಹತೆ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿಗಳಾಗಿತ್ತು. ಕೆಲವರು ಮೆಕ್ಯಾನಿಕಲ್‌, ಟೆಲಿ ಕಮ್ಯೂನಿಕೇಷನ್‌ ಇಂಜಿನಿಯರಿಂಗ್‌ ಮುಗಿಸಿ ಸರ್ಕಾರಿ ವಸತಿ ನಿಲಯಗಳಲ್ಲಿ ಅಡುಗೆ ಮಾಡಲು ಅರ್ಜಿ ಸಲ್ಲಿಸಿ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದರು.

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 146 ಹುದ್ದೆಗಳಿದ್ದು ಆರು ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. 1:5 ಅನುಪಾತದಲ್ಲಿ ದಾಖಲೆ ಪರಿಶೀಲನೆ ನಂತರ ಅರ್ಹತೆ ಪಡೆದ ಅಭ್ಯರ್ಥಿಗಳು 1:3 ಅನುಪಾತದಲ್ಲಿ ಪ್ರಾಯೋಗಿಕ ಅಡುಗೆ ತಯಾರಿ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಅಭ್ಯರ್ಥಿಗಳ ವಿದ್ಯಾಭ್ಯಾಸದ ಕುರಿತು ಮಾಹಿತಿ ಕೇಳಿದಾಗ ಮಾಧ್ಯಮಗಳ ಮುಂದೆ ಮಾತನಾಡಲು ಸ್ನಾತಕೋತ್ತರ ಹಾಗೂ ಇಂಜಿನಿಯರಿಂಗ್‌ ಅಭ್ಯರ್ಥಿಗಳು ನಿರಾಕರಿಸಿದರು. ತಮ್ಮ ವಿದ್ಯಾಭ್ಯಾಸಕ್ಕೆ
ತಕ್ಕಂತೆ ಸರ್ಕಾರಿ ಕೆಲಸ ಸಿಗದೇ ಇರುವುದು, ಮನೆಯಲ್ಲಿ ಬಡತನ ಇರುವ ಕಾರಣ ಡಿ ಗ್ರೂಪ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next