Advertisement

ಯಾವಾಗ ಬಾಂಬ್‌ ಹಾಕ್ಬೇಕು ಎಂಬುದು ಗೌಡರಿಗೆ ಗೊತ್ತು

09:19 AM Sep 02, 2017 | |

ಬೆಂಗಳೂರು: ದೇವೇಗೌಡರಿಗೆ ರಾಜಕಾರಣ ಕಲಿಸಿ ಕೊಡಬೇಕಿಲ್ಲ. ಯಾರಿಗೆ, ಯಾವ ಸಮಯದಲ್ಲಿ “ಬಾಂಬ್‌’ ಹಾಕಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌, ಬಿಜೆಪಿ ಏನೇ ಆಟ
ಆಡಿದ್ರೂ ಅದಕ್ಕೆತಿರು ಮಂತ್ರ ಹಾಕೋದು ಗೌಡರಿಗೆ ಗೊತ್ತಿದೆ. ಇವತ್ತು ಶುಕ್ರವಾರ, ಒಳ್ಳೇ ದಿನ, ಬಾಂಡ್‌ ಪೇಪರ್‌ನಲ್ಲಿ ಬರೆದು ಕೊಡ್ತೀನಿ ಮುಂದಿನ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರೋದು ಖಚಿತ. ಜೆಡಿಎಸ್‌ ಅಧಿಕಾರಕ್ಕೆ ಬಂದು ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಎಲ್ಲ ಸಾಲ ಮನ್ನಾ ಮಾಡ್ತೇವೆ ಎಂದು ತಿಳಿಸಿದರು.

Advertisement

ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಕೆಲಸ ಮಾಡುತ್ತಿದ್ದಾನೆ. ಆತನಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್‌ ನೀಡುವುದು, ಬಿಡುವುದು ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಬಿಟ್ಟಿದ್ದು. ಅವರ ತೀರ್ಮಾನವೇ ಅಂತಿಮ ಎಂದು ಹೇಳಿದರು. “ನಾನು ಹದಿನೈದು ವರ್ಷ ದೇವೇಗೌಡರ ಜತೆ ಚೀಲ ಹೊತ್ತಿದ್ದಕ್ಕೆ ವಿಧಾನ ಸಭೆ ಟಿಕೆಟ್‌ ಸಿಕ್ತು. ಈಗ ಪ್ರಜ್ವಲ್‌ ಆ ಕೆಲಸ ಮಾಡು ತ್ತಿ ದ್ದಾನೆ. ಸರಿ ಯಾದ ಸಮಯದಲ್ಲಿ ಪಕ್ಷ  ತೀರ್ಮಾನ ತೆಗೆದುಕೊಳ್ಳುತ್ತದೆ. ಈಗ ಸದ್ಯಕ್ಕೆ ನಾನು ಹಾಗೂ ಕುಮಾರ ಸ್ವಾಮಿ ಜೆಡಿಎಸ್‌ ಟಿಕೆಟ್‌ಗೆ ಅರ್ಜಿ ಹಾಕಿದ್ದೇವೆ.
ಪ್ರಜ್ವಲ್‌ ಪರ ನಾನು ಅರ್ಜಿ ಹಾಕಬೇಕಿಲ್ಲ, ಆತನೇ ಅರ್ಜಿ ಹಾಕಬಲ್ಲ’ ಎಂದು ಸೂಕ್ಷ್ಮವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next