Advertisement

ನಕ್ಸಲ್‌ ಪಿಡುಗು ಮಟ್ಟ ಹಾಕಲು ಹೊಸ ನೀತಿ: ಕೇಂದ್ರಕ್ಕೆ ಕಾಂಗ್ರೆಸ್‌ ಆಗ್ರಹ

09:26 AM Jun 18, 2019 | Sathish malya |

ಹೊಸದಿಲ್ಲಿ : ಜಾರ್ಖಂಡ್‌ ನಲ್ಲಿ ಈಚೆಗೆ ಐವರು ಪೊಲೀಸರನ್ನು ಬಲಿಪಡೆದಿರುವ ನಕ್ಸಲ್‌ ಪಿಡುಗನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಲು ಕೇಂದ್ರ ಸರಕಾರ ಹೊಸ ಕರಡು ನೀತಿಯನ್ನು ಸಿದ್ಧಪಡಿಸುವ ಅಗತ್ಯವಿದೆ ಎಂದು ಕಾಂಗ್ರೆಸ್‌ ಹೇಳಿದೆ.

Advertisement

ಜಾರ್ಖಂಡ್‌-ಬಂಗಾಲ ಗಡಿ ಸಮೀಪದ ಸೆರಾಯ್‌ಕೇಲಾ-ಖರ್ಸವಾನ್‌ ನಿನ್ನೆ ಶುಕ್ರವಾರ ಮಾವೋ ಉಗ್ರರು ಹೊಂಚು ದಾಳಿ ನಡೆಸಿ ಐವರು ಪೊಲೀಸರನ್ನು ಬಲಿಪಡೆದ ಕೃತ್ಯ ಖಂಡನಾರ್ಹ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್‌ಜೇವಾಲಾ ಇಂದು ಶನಿವಾರ ಹೇಳಿದರು.

ನಕ್ಸಲ್‌ವಾದದ ಹೇಡಿತನದ ಮುಖ ಜಾರ್ಖಂಡ್‌ನ‌ಲ್ಲೀಗ ವ್ಯಾಪಿಸುತ್ತಿದೆ; ದೇಶದ ಸರಕಾರ ನಕ್ಸಲ್‌ ಪಿಡುಗನ್ನು ಮಟ್ಟ ಹಾಕಲು ಹೊಸ ಕರಡು ನೀತಿಯನ್ನು ಸಿದ್ಧಪಡಿಸಬೇಕಿದೆ ಎಂದು ಸುರ್‌ಜೇವಾಲ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next