Advertisement

ನೈಟ್ರೋಜನ್‌ ತುಂಬಿದ ಟೈರ್‌ ಬಳಕೆ ಕಡ್ಡಾಯ: ಸರಕಾರದ ಗಂಭೀರ ಚಿಂತನೆ

10:35 AM Jul 09, 2019 | Sathish malya |

ಹೊಸದಿಲ್ಲಿ : ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನೈಟ್ರೋಜನ್‌ ತುಂಬಿದ ಟೈರ್‌ ಬಳಕೆಯನ್ನು ಕಡ್ಡಾಯ ಮಾಡುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ.

Advertisement

ಅದಕ್ಕಾಗಿ ನೈಟ್ರೋಜನ್‌ ತುಂಬಲಾಗುವ, ರಬ್ಬರ್‌-ಸಿಲಿಕಾನ್‌ ಮಿಶ್ರಣದ ಉತ್ತಮ ಗುಣಮಟ್ಟದ ಟೈರ್‌ ಉತ್ಪಾದನೆಯನ್ನು ಕಡ್ಡಾಯಗೊಳಿಸುವುದನ್ನು ಸರಕಾರ ಚಿಂತಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಇಂದು ಸೋಮವಾರ ರಾಜ್ಯಸಭೆಗೆ ತಿಳಿಸಿದರು.

ನೋಯ್ಡಾ – ಆಗ್ರಾ ಹೈವೆಯಲ್ಲಿ ಇಂದು 29 ಪ್ರಯಾಣಿಕರನ್ನು ಬಲಿ ಪಡೆದು ಸಂಭವಿಸಿರುವ ಭೀಕರ ರಸ್ತೆ ಅಪಘಾತ ಅತ್ಯಂತ ದುರದೃಷ್ಟಕರ ಎಂದು ಹೇಳಿದ ಸಚಿವ ಗಡ್ಡರಿ, ಉತ್ತರ ಪ್ರದೇಶ ಸರಕಾರ ಈಗಾಗಲೇ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು ಅವಘಡದ ಹಿಂದಿನ ಕಾರಣಗಳನ್ನು ತಿಳಿಯಲಾಗುವುದು ಎಂದು ಹೇಳಿದರು.

ಯಮುನಾ ಎಕ್ಸ್‌ಪ್ರೆಸ್‌ ವೇ ಯನ್ನು ಉತ್ತರ ಪ್ರದೇಶ ಸರಕಾರವೇ ನಿರ್ಮಿಸಿದ್ದು ಅದಕ್ಕೂ ಕೇಂದ್ರ ಸರಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಗಡ್ಕರಿ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next