Advertisement

ಆನ್‌ ಲೈನ್‌ ಸುದ್ದಿತಾಣ ನಿಯಂತ್ರಣ?

10:00 AM Apr 07, 2018 | Team Udayavani |

ಹೊಸದಿಲ್ಲಿ: ಸುಳ್ಳು ಸುದ್ದಿಗಳ ವಿರುದ್ಧದ ಆದೇಶವನ್ನು ವಾಪಸ್‌ ಪಡೆದ ಬೆನ್ನಲ್ಲೇ ಕೇಂದ್ರ ಸರಕಾರ ಇದೀಗ ಆನ್‌ ಲೈನ್‌ ಮಾಧ್ಯಮ ಮತ್ತು ಸುದ್ದಿ ಜಾಲತಾಣಗಳನ್ನು ನಿಯಂತ್ರಿಸಲು ಸಿದ್ಧವಾಗಿದೆ. ಈ ಸಂಬಂಧ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸಮಿತಿಯನ್ನು ರೂಪಿಸಿದ್ದು, ಇದು ರೂಪುರೇಷೆಯನ್ನು ಶಿಫಾರಸು ಮಾಡಲಿದೆ.ಸಚಿವಾಲಯವು ಬುಧವಾರ ಸಚಿವೆ ಸ್ಮತಿ ಇರಾನಿ ನೇತೃತ್ವದ ಸಮಿತಿ ರಚಿಸಿದ್ದು, 10 ಸದಸ್ಯರ ಸಮಿತಿಯಲ್ಲಿ ಗೃಹ, ಇಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ಉದ್ಯಮ ನೀತಿ ಹಾಗೂ ಉತ್ತೇಜನ ಸಚಿವಾಲಯಗಳ ಕಾರ್ಯದರ್ಶಿಗಳು ಇರಲಿದ್ದಾರೆ. ಹಲವು ವಿಷಯಗಳ ಬಗ್ಗೆ ಈ ಸಮಿತಿ ಸಚಿವಾಲಯಕ್ಕೆ ಶಿಫಾರಸುಗಳನ್ನು ನೀಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next