Advertisement

ಕುಸಿಯುವ ಹಂತದಲ್ಲಿ ಸರಕಾರಿ ಬಾವಿ

12:21 PM Jul 25, 2018 | Team Udayavani |

ಬೆಳ್ತಂಗಡಿ : ವಿಪರೀತ ಮಳೆಯಿಂದಾಗಿ ಮುಂಡಾಜೆ ಗ್ರಾಮದ ಕಾಂತ್‌ ಪಾಲುನಲ್ಲಿರುವ ಸರಕಾರಿ ಬಾವಿಯ ಕಟ್ಟೆ ಕುಸಿಯುವ ಹಂತದಲ್ಲಿದ್ದು, ಮುಂಜಾಗ್ರತ ಕ್ರಮವಾಗಿ ಮುಂಡಾಜೆ ಗ್ರಾಮ ಪಂಚಾಯತ್‌ನವರು ಬಾವಿಯಿಂದ ನೀರು ಸೇದುವುದನ್ನು ನಿಷೇಧಿಸಿ ಸೂಚನಾ ಫಲಕವನ್ನು ಅಳವಡಿಸಿದ್ದಾರೆ.

Advertisement

ಬಾವಿಯ ಸುತ್ತಲು ಮಣ್ಣು ಕುಸಿಯುವ ಸ್ಥಿತಿಯಲ್ಲಿದೆ. ಪರಿಸರದವರು ಈ ಬಾವಿಯ ನೀರನ್ನು ಆಶ್ರಯಿಸಿದ್ದರು. ಜತೆಗೆ ನಳ್ಳಿ ನೀರಿನ ಸಂಪರ್ಕವೂ ಇರುವುದರಿಂದ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ. ಮಳೆಗಾಲ ಮುಗಿದ ಬಳಿಕ ಸೂಕ್ತ ನಿರ್ವಹಣೆಯನ್ನು ಮಾಡಬೇಕಾಗಿದ್ದು, ಅಲ್ಲಿಯವರೆಗೆ ಯಾರೂ ಬಾವಿಯ ಬಳಿಗೆ ತೆರಳದಂತೆ ಸೂಚನಾ ಫಲಕ ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next