Advertisement

ನೇತ್ರಾವತಿಯ ಬರಡು ಮಾಡಲು ಸರಕಾರದ ಷಡ್ಯಂತ್ರ: ದ.ಕ. ಬಿಜೆಪಿ

07:05 AM Aug 10, 2017 | Team Udayavani |

ಮಂಗಳೂರು: ಎತ್ತಿನಹೊಳೆ ಯೋಜನೆಯ ಮುಖಾಂತರ ಕೋಲಾರದ ಭಾಗಕ್ಕೆ ನೀರು ಸಮರ್ಪಕವಾಗಿ ಕೊಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ವಿಚಾರ ಮನವರಿಕೆಯಾಗಿರುವುದರಿಂದ ಈಗ ನೇತ್ರಾವತಿ ನದಿಯನ್ನು ಬರಡು ಮಾಡುವ ಇನ್ನೊಂದು ಷಡ್ಯಂತ್ರಕ್ಕೆ ರಾಜ್ಯ ಸರಕಾರ ಕೈ ಹಾಕಿರುವುದು ಖಂಡನೀಯ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಎಸ್‌. ಕೊಟ್ಟಾರಿ ಹೇಳಿದ್ದಾರೆ.

Advertisement

ನೇತ್ರಾವತಿ ನದಿಯಿಂದ ಸಮುದ್ರಕ್ಕೆ ಸೇರುವ ನೀರನ್ನು ಬಳಸುವ ಪ್ರಸ್ತಾವನೆಯ ಸಾಧ್ಯತಾ ವರದಿಯನ್ನು ಸಿದ್ಧಪಡಿಸಿರುವುದು ಇಡೀ ಜಿಲ್ಲೆಯನ್ನೇ ಆತಂಕಕ್ಕೀಡುಮಾಡಿದೆ ಮತ್ತು ಇದನ್ನು ಜಿಲ್ಲಾ ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ತತ್‌ಕ್ಷಣವೇ ಈ ಸಾಧ್ಯತಾ ವರದಿಯನ್ನು ಕೈಬಿಡಬೇಕು ಎಂದವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next