Advertisement

Foundation: ಕಾಶಿಯಲ್ಲಿ ದೀಪಾವಳಿ ಮುನ್ನ ಅಭಿವೃದ್ಧಿ ಹಬ್ಬ: ಪ್ರಧಾನಿ ನರೇಂದ್ರ ಮೋದಿ

01:16 AM Oct 21, 2024 | Team Udayavani |

ವಾರಾಣಸಿ: “ದೀಪಾವಳಿ ಪೂಜೆಗೆ ಮೊದಲೇ ಕಾಶಿಯಲ್ಲಿ ಅಭಿವೃದ್ಧಿಯ ಹಬ್ಬ ಆರಂಭವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿ ದ್ದಾರೆ. ಸ್ವಕ್ಷೇತ್ರ ವಾರಾಣಸಿಯಲ್ಲಿ 6700 ಕೋಟಿ ರೂ.ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

Advertisement

“10 ವರ್ಷಗಳ ಹಿಂದೆ ವಾರಾಣಸಿಯಲ್ಲಿ ಅಭಿವೃದ್ಧಿಯ ವಾತಾವರಣ ಇರಲಿಲ್ಲ. ಅದನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಈಗ ಅಭಿವೃದ್ಧಿಯ ಹಬ್ಬ ಆರಂಭವಾಗಿದೆ’ ಎಂದರು. ಕಾಂಗ್ರೆಸ್‌ನ ಕುಟುಂಬ ರಾಜಕಾರಣದಿಂದ ದೇಶ ಸಮಸ್ಯೆ ಎದುರಿಸುತ್ತಿದೆ. ವಾರಾಣಸಿಯ ಮೂಲ ಭೂತ ಸೌಕರ್ಯಕ್ಕೆ ಸಂಬಂಧಿ ಸಿದಂತೆ 3,200 ಕೋಟಿ ರೂ. ವೆಚ್ಚದ 16 ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು.


ಎನ್‌ಡಿಎಗೆ ಹೊಸ ವ್ಯಾಖ್ಯಾನ
ಎನ್‌ಡಿಎ ಎಂದರೆ ನರೇಂದ್ರ ದಾಮೋದರ್‌ ದಾಸ್‌ ಅನುಶಾಸನ ಎಂದು ಕಂಚಿ ಮಠದ ಪೀಠಾಧಿಪತಿ ಗಳಾದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮಿ ಹೇಳಿದ್ದಾರೆ. ಮಠದ ಕಣ್ಣಿನ ಆಸ್ಪತ್ರೆ ಉದ್ಘಾಟನೆ ಬಳಿಕ ಮಾತನಾಡಿ, ಮೋದಿಗೆ ದೇವರು ಆಶೀರ್ವದಿಸಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next