Advertisement

ಸರ್ಕಾರಿ ಬಸ್‌ ಢಿಕ್ಕಿ: ಕಾರು ನಜ್ಜು ಗುಜ್ಜು; ನಾಲ್ವರು ಗಂಭೀರ 

11:36 AM Jan 26, 2018 | Team Udayavani |

ಪುತ್ತೂರು:ಇಲ್ಲಿದ ಕಬಕ ಬಳಿಯ ಪೋಳ್ಯದಲ್ಲಿ ರಾಜಹಂಸ ಬಸ್ಸೊಂದು ಐ20 ಕಾರಿಗೆ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಪುತ್ತೂರು ಕಡೆಯಿಂದ ಬರುತ್ತಿದ್ದ ಬಸ್‌ ಮತ್ತು ಮಂಗಳೂರಿನಿಂದ ಬರುತ್ತಿದ್ದ ಕಾರು ಮುಖಾಮುಖೀ ಢಿಕ್ಕಿಯಾಗಿ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ  ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ  ಗಾಯಗೊಂಡಿದ್ದಾರೆ.

ಬಸ್‌ ಚಾಲಕನ ಅಜಾಗರುಕತೆಯೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಗಾಯಾಳುಗಳನ್ನು ಹೊರತೆಗೆಯಲು ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು. ಅಫಘಾತ ಸ್ಥಳದಲ್ಲಿ ಯಾರೂ ಇಲ್ಲದ ವೇಳೆಯಲ್ಲಿ  ನೆರವಿಗೆ ಬಂದ ಕಬಕದ ಹರ್ಷದ್ ಕೆ.ಎಸ್ ಸ್ಥಳಕ್ಕೆ ಇತರರ ಸಹಾಯ ಪಡೆದು ರಕ್ಷಣೆ ನಡೆಸಿದರು.

ಕಾರಿನಲ್ಲಿದ್ದವರು ಗೋವಾ ಮೂಲದವರೆಂದು ತಿಳಿದು ಬಂದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next