Advertisement

ಇಂದಿನಿಂದ ಸರಕಾರಿ ಬಸ್‌ ಸಂಚಾರ : ದಕ್ಷಿಣ ಕನ್ನಡ, ಮೈಸೂರು ಬಿಟ್ಟು ಉಳಿದೆಡೆ ಆರಂಭ

02:19 AM Jun 21, 2021 | Team Udayavani |

ಬೆಂಗಳೂರು : ಸೋಮವಾರದಿಂದ ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆ ಹೊರತುಪಡಿಸಿ ರಾಜ್ಯಾದ್ಯಂತ ಸರಕಾರಿ ಬಸ್‌ಗಳ ಸಂಚಾರ ಆರಂಭವಾಗಲಿದೆ.

Advertisement

ಅನ್‌ಲಾಕ್‌ ಆದೇಶದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿಯ ಎಲ್ಲ ಪ್ರಕಾರಗಳ ಬಸ್‌ಗಳು ರಾತ್ರಿ ಕರ್ಫ್ಯೂ ಅವಧಿ ಸಹಿತ ದಿನಪೂರ್ತಿ ಸಂಚರಿಸಲಿವೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಿಗಮವು ಅನುಸೂಚಿಗಳ ವ್ಯವಸ್ಥೆ ಕಲ್ಪಿಸಲಿದೆ.

ಮೈಸೂರಿಗೆ ಬಸ್‌ ವ್ಯವಸ್ಥೆ ಇರುವುದಿಲ್ಲ. ಮೈಸೂರು ದಾಟಿ ಹೋಗಬೇಕಾದ ಬಸ್‌ಗಳು ಹೊರವಲಯದ ಮೂಲಕವೇ ಹಾದುಹೋಗಬೇಕು. ಜಿಲ್ಲೆಯಲ್ಲಿ ಯಾರಿಗೂ ಬಸ್ಸೇರಲು, ಇಳಿಯಲು ಅವಕಾಶವಿಲ್ಲ. ಸ್ಥಳೀಯ ಸಾರಿಗೆ ಇರುವುದಿಲ್ಲ.
ಪ್ರಯಾಣಿಕರು ಮತ್ತು ಸಿಬಂದಿಯ ಹಿತದೃಷ್ಟಿಯಿಂದ ಎರಡೂ ಲಸಿಕೆ ಪಡೆದ ಸಿಬಂದಿಯನ್ನು ಆದ್ಯತೆಯ ಮೇರೆಗೆ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ದ.ಕ.ದಲ್ಲಿ ಬಸ್‌ ಇಲ್ಲ
ರವಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2ನೇ ಹಂತದ ಸಡಿಲಿಕೆಯ ಆದೇಶ ಹೊರಡಿಸಿದ್ದು, ಜಿಲ್ಲೆಯ ಮೂಲಕ ಮತ್ತು ಒಳಗೆ ಬಸ್‌ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮಂಗಳೂರು ಸರಹದ್ದಿನ ಹೊರಗೆ ಬಸ್‌ಗಳು ನಿಲುಗಡೆ ಆಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next