Advertisement

ರೈತರಿಗೆ ಕೂಡಲೇ ಪರಿಹಾರ ವಿತರಣೆಗೆ ಬಾದರ್ಲಿ ಒತ್ತಾಯ

03:55 PM Apr 26, 2020 | Naveen |

ಗೊರೇಬಾಳ: ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ ಸುಮಾರು 5 ಸಾವಿರ ಎಕರೆ ಪ್ರದೇಶ ಭತ್ತ ಹಾನಿಯಾಗಿದೆ. ಸರ್ಕಾರ ಕೂಡಲೇ ಪರಿಹಾರ ವಿತರಿಸಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.

Advertisement

ಮುಕುಂದ, ಸಿಂಗಪುರ ಹೊಲಗಳಿಗೆ ಭೇಟಿ ನೀಡಿ ಭತ್ತ ಹಾನಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರ್‍ನಾಲ್ಕು ವರ್ಷಗಳಿಂದ ರೈತರಿಗೆ ಎರಡನೇ ಬೆಳೆ ಸಿಕ್ಕಿರಲಿಲ್ಲ. ಆದರೆ ಈ ವರ್ಷ ಎರಡನೇ ಬೆಳೆ ಭತ್ತ ನಾಟಿ ಮಾಡಲಾಗಿದೆ. ಉತ್ತಮ ಬೆಳೆ ರೈತನ ಕೈ ಸೇರಬೇಕು ಎನ್ನುವಷ್ಟರಲ್ಲಿ ಅಕಾಲಿಕ ಮಳೆ ಗಾಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.

ರಾಜ್ಯದಲ್ಲಿ ಕೋವಿಡ್ ವೈರಸ್‌ ನಿಯಂತ್ರಣಕ್ಕೆ ಸರ್ಕಾರ ಹರ ಸಾಹಸ ಪಡುತ್ತಿದೆ. ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಕೊರೊನಾ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿ ರೈತರ ಹಿತ ಕಾಯಲು ಸರ್ಕಾರ ಎರಡನೇ ಆದ್ಯತೆ ನೀಡಬೇಕಾಗಿದೆ. ಭತ್ತ ಬೆಳೆಗೆ ರೈತ ಖರ್ಚು ಮಾಡಿದ ಹಣವಾದರೂ ಪರಿಹಾರದ ರೂಪದಲ್ಲಿ ನೀಡಬೇಕು ಎಂದು ಆಗ್ರಹಿಸಿದರು. ಸಾಯಿರಾಮಕೃಷ್ಣ, ಅಮರೇಶ, ಶಕಂಕರಗೌಡ, ಲಂಕೆಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next