Advertisement

ಗೋಪಾಡಿ: ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರ

07:10 AM Jul 23, 2017 | |

ಕೋಟೇಶ್ವರ:  ಗೋಪಾಡಿಯ ತಿರುವಿನಿಂದ ವಕ್ವಾಡಿಗೆ ಸಾಗುವ ಜಿ.ಪಂ. ನ ಸುಪರ್ದಿಯ ಮುಖ್ಯ ರಸ್ತೆಯು ಭಾರೀ ಹೊಂಡಗಳಿಂದ ಕೂಡಿದ್ದು ಪಾದಚಾರಿಗಳು ಸಾಗದಷ್ಟು ದುಸ್ಥಿತಿಯಲ್ಲಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಸುಮಾರು 7 ಕೋಟಿ ರೂ. ವೆಚ್ಚದಲ್ಲಿ  ಗೋಪಾಡಿಯಿಂದ ಚಾರುಕೊಟ್ಟಿಗೆ ತನಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಟೆಂಡರ್‌ ಆಗಿದ್ದು ಮಳೆಯ ನಿಮಿತ್ತ ಕಾಮಗಾರಿ ಆರಂಭಗೊಳ್ಳದಿರುವುದು ಆ ಮಾರ್ಗವಾಗಿ ಸಾಗುವ ನಿತ್ಯ ಸಂಚಾರಿಗಳಿಗೆ ಹರಸಾಹಸ ಪಟ್ಟು ಸಾಗಬೇಕಾದ ಸಂದಿಗª ಪರಿಸ್ಥಿತಿ ಬಂದೊದಗಿದೆ. ಮಳೆಗಾಲದ ಮೊದಲು ಹದಗೆಟ್ಟ ಈ ರಸ್ತೆಯ ಹೊಂಡಗಳಿಗೆ ಡಾಮಾರು ಲೇಪ ಹಾಕಲಾಗಿದ್ದರೂ ಮಳೆ ಆರಂಭಗೊಂಡಂತೆ ಈ ರಸ್ತೆಯು ಹೊಂಡಮಯವಾಗಿರುವುದು ಲಘು ಹಾಗೂ ಘನ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ.

ಮಳೆಯ ಕಾರಣ ಗುತ್ತಿಗೆದಾರರರಿಗೆ ಕಾಮಗಾರಿ ಆರಂಭಿಸುವುದು ಕಷ್ಟಸಾಧ್ಯವಾಗಿರುವುದರಿಂದ ಮಳೆ ಮುಗಿಯುತ್ತಿರುವಂತೆ ಕಾಂಕ್ರೀಟೀಕರಣದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜಿ.ಪಂ. ಸದಸ್ಯೆ ಶ್ರೀಲತಾ ಎಸ್‌. ಶೆಟ್ಟಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next