Advertisement

ದೇವನಹಳ್ಳಿಯಲ್ಲಿ ಉತ್ತಮ ಮಳೆ: 10 ವಿಮಾನಗಳ ಸಂಚಾರ ವ್ಯತ್ಯಯ

12:18 AM Apr 05, 2023 | Team Udayavani |

ಬೆಂಗಳೂರು: ದೇವನಹಳ್ಳಿಯಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದ್ದು, ಯುಗಾದಿ ಬಳಿಕ ಮೊದಲ ವರ್ಷಧಾರೆ ರೈತರು ಮತ್ತು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.

Advertisement

ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿರುಗಾಳಿ ಮಳೆಯ ಪರಿಣಾಮ 10 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಆಗಿದೆ. ಸರಿಯಾದ ಸಮಯಕ್ಕೆ ಲ್ಯಾಂಡಿಂಗ್‌ ಆಗದೆ ವಿಮಾನಗಳು ಹಾರಾಟ ಸಾಕಷ್ಟು ತಡವಾಗಿವೆ.

ಹಲವಾರು ವಿಮಾನಗಳನ್ನು ಇಳಿಸಲು ಸಾಧ್ಯವಾಗದೆ ಚೆನ್ನೈ, ಹೈದರಾಬಾದ್‌ ವಿಮಾನ ನಿಲ್ದಾಣಗಳಿಗೆ ಪಥ ಬದಲಾವಣೆ ಮಾಡಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next