Advertisement

ರಾಜಧಾನಿ ಹಲವೆಡೆ ಧಾರಾಕಾರ ವರ್ಷಧಾರೆ

11:44 AM Sep 13, 2020 | Suhan S |

ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿ ಶನಿವಾರ ಧಾರಾಕಾರ ಮಳೆಯಾಗಿದ್ದು, ಉಳಿದೆಡೆ ತುಂತುರು ಮಳೆಯಾಗಿದೆ.

Advertisement

ಶನಿವಾರ ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಎಂ.ಜಿ ರಸ್ತೆ, ಟ್ರನಿಟಿ, ರಿಚ್ಮಂಡ್‌ ಸರ್ಕಲ್‌, ಮೆಜೆಸ್ಟಿಕ್‌, ಕೃಷ್ಣ  ರಾಜೇಂದ್ರ ಮಾರುಕಟ್ಟೆ, ಚಾಮರಾಜಪೇಟೆ, ಹಲ ಸೂರು ಹಾಗೂ ಶಿವಾಜಿ ನಗರ ಸೇರಿದಂತೆ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ನಗರದ ಹಲವು ಅಂಡರ್‌ ಪಾಸ್‌ ಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಜೆ ವೇಳೆ ಮಳೆ ಸುರಿದ ಕಾರಣ ಆμàಸುಗಳಿಂದ ಮನೆಗೆ ತೆರಳುವ ನಾಗರಿಕರು ಮನೆಗೆ ತೆರಳಲು ಕೆಲ ಹೊತ್ತು ಪರಿತಪಿಸುವಂತಾಯಿತು. ಬಾಪೂಜಿನಗರ ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ನೀರು ಚರಂಡಿ ತುಂಬಿ ರಸ್ತೆಗೆ ಹರಿಯಿತು. ಬಾಪೂಜಿನಗರದಲ್ಲಿ ಚರಂಡಿ ತುಂಬಿದ ಮಳೆ ನೀರು ರಸ್ತೆಗೆ ಹರಿಯಿತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಡಬೇಕಾಯಿತು.

ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ಮರ ಧರೆಗುರುಳಿ ರುವುದು ವರದಿಯಾಗಿದೆ. ಉಳಿದಂತೆ ಓಕಳಿಪುರಂ, ಕೆ.ಆರ್‌.ವೃತ್ತ, ಆನಂದ ರಾವ್‌ ವೃತ್ತ, ಬಸವೇಶ್ವರ ವೃತ್ತ, ಶಿವಾನಂದ ವೃತ್ತ ಮತ್ತು ರೈಲ್ವೆ ಅಂಡರ್‌ ಪಾಸ್‌, ಮಲ್ಲೇಶ್ವರದ ಮಂತ್ರಿ ಮಾಲ್‌ ಮುಂಭಾಗ ನೀರು ನಿಂತಿದ್ದು ವರದಿಯಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ?  : ಮಾರುತಿ ಮಂದಿರ 25.5 ಮಿ.ಮೀ, ಗಾಳಿಆಂಜನೇಯ ಸ್ವಾಮಿ ದೇವಸ್ಥಾನ 20ಮಿ.ಮೀ, ಜ್ಞಾನಭಾರತಿ 22ಮಿ.ಮೀ, ಚಾಮರಾಜಪೇಟೆ 25 ಮಿ.ಮೀ, ಅಗ್ರಹಾರ ದಾಸರಹಳ್ಳಿ 20 ಮಿ.ಮೀ, ವಿಶ್ವೇಶ್ವರಪುರ 21 ಮಿ.ಮೀ, ಬಸವನಗುಡಿ 20 ಮಿ.ಮೀ, ಸಂಪಂಗಿ ರಾಮನಗರ 22 ಮಿ.ಮೀ, ನಂದಿನಿಲೇಔಟ್‌ 10ಮಿ.ಮೀ, ಹಂಪಿನಗರ 8 ಮಿ.ಮೀ, ಲಕ್ಕಸಂದ್ರ 16 ಮಿ.ಮೀ, ಸಾರಕ್ಕಿ 15 ಮಿ.ಮೀ, ಬೇಗೂರು 8 ಮಿ.ಮೀ ಸೇರಿದಂತೆ ನಗರದ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next