Advertisement

ಗೋಣಿಕೊಪ್ಪಲು: ವಿವಿಧ ಕಾಮಗಾರಿಗಳಿಗೆ ಚಾಲನೆ

04:13 PM Mar 13, 2017 | Team Udayavani |

ಗೋಣಿಕೊಪ್ಪಲು: ಜಿ.ಪಂ. ಅನುದಾನದ 8.60 ಲಕ್ಷ ರೂಪಾಯಿಗಳಲ್ಲಿ ವಿವಿಧ ಕಾಮಗಾರಿಗಳಿಗೆ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಭೂಮಿ ಪೂಜೆ ನೆರವೇರಿಸಿದರು.

Advertisement

ಅತ್ತೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಕೆರೆ ಅಭಿವೃದ್ದಿಗೆ 2.60 ಲಕ್ಷ ರೂ, ಅತ್ತೂರು ಪ್ರಾಥಮಿಕ ಶಾಲೆಗೆ ಇಂಟರ್‌ಲಾಕ್‌ ಅಳವಡಿಕೆಗೆ 2 ಲಕ್ಷ ರೂ., ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಪೈಪ್‌ಲೈನ್‌ ಮತ್ತು ಮೋಟಾರ್‌ ಅಳವಡಿಕೆಗೆ 2 ಲಕ್ಷ ರೂ. ಅರುವತ್ತೋಕ್ಲು ಕೊಳವೆ ಬಾವಿ ತೋಡಲು 2 ಲಕ್ಷ ರೂಪಾಯಿಗಳ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಜಿ.ಪಂ. ಅನುದಾನವನ್ನು ಸಮರ್ಪಕವಾಗಿ ಬಳಸಿ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಮನಃಪೂರ್ವಕ ಸ್ಪಂದಿಸುತ್ತಿದ್ದೇನೆ. ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳದೆ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. 5 ವರ್ಷಗಳ ಜಿ.ಪಂ. ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುತ್ತೇನೆ. ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ಪಂಚಾಯತ್‌ ಅಧ್ಯಕ್ಷರ ಹಾಗೂ ಸದಸ್ಯರ, ಸಾರ್ವಜನಿಕರ ಬೆಂಬಲ ಅಗತ್ಯ ಎಂದು ಸಿ.ಕೆ. ಬೋಪಣ್ಣ ಹೇಳಿದರು.

ಈ ಸಂದರ್ಭ ಹಾತೂರು ಅಧ್ಯಕ್ಷೆ ಆಶಾಲತಾ, ಸದಸ್ಯ ಕುಲ್ಲಚಂಡ ಚಿಣ್ಣಪ್ಪ, ಮ್ಯಾಥುÂ ಸುಭಾಷ್‌, ಆರ್‌. ಸಾವಿತ್ರಮ್ಮ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ರಾಮಕೃಷ್ಣ ಭಟ್‌, ಸ್ಥಳ ದಾನಿಗಳಾದ ಸಣ್ಣುವಂಡ ಕಿಶೋರ್‌ ಮಾಚಯ್ಯ, ರತ್ನಾ ಸುಬ್ಬಯ್ಯ, ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ಮತ್ತು ಸಹ ಶಿಕ್ಷಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next