Advertisement

ಗೋಳ್ವಲ್ಕರ್‌ ರಾಷ್ಟ್ರೀಯವಾದ ಕುರಿತು ತಪ್ಪು ವಿಮರ್ಶೆ

02:00 AM Jul 10, 2017 | Harsha Rao |

ಹೊಸದಿಲ್ಲಿ: ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಟ್ಟರ್‌ ರಾಷ್ಟ್ರೀಯವಾದ ಹೆಚ್ಚುತ್ತಿದೆ ಎಂದು ವಿಪಕ್ಷಗಳು, ಎಡ ಪಂಥೀಯರು ಹುಯಿಲೆಬ್ಬಿಸುತ್ತಿರುವಂತೆಯೇ, ಆರೆಸ್ಸೆಸ್‌ ಚಿಂತಕ, ಎಮ್‌.ಎಸ್‌.ಗೋಳ್ವಲ್ಕರ್‌ ಅವರ ರಾಷ್ಟ್ರೀಯವಾದದ ದೃಷ್ಟಿಕೋನವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧೀನ ಸಂಸ್ಥೆಯೊಂದು ಹೇಳಿದೆ. 

Advertisement

ಗೋಳ್ವಲ್ಕರ್‌ ಅವರ ರಾಷ್ಟ್ರೀಯವಾದ ಕುರಿತ ಚಿಂತನೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಮತ್ತು ದೋಷಪೂರಿತವಾಗಿದೆ ಎಂಬಂತೆ ಚಿತ್ರಿಸಲಾಗಿದೆ ಎಂದು ಅದು ಹೇಳಿದೆ. ಭಾರತೀಯ ತತ್ವಶಾಸ್ತ್ರ ಸಂಶೋಧನಾ ಸಮಿತಿ (ಐಸಿಆರ್‌ಪಿ) “ಗೋಳ್ವಲ್ಕರ್‌ ಚಿಂತನೆಯಲ್ಲಿ ರಾಷ್ಟ್ರ ಮತ್ತು ರಾಷ್ಟ್ರೀಯವಾದ’ ಹೆಸರಿನ ವಿಚಾರ ಸಂಕಿರಣವನ್ನು ಮುಂದಿನ ತಿಂಗಳು ಆಯೋ ಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಚಿಂತನೆ ಗಳನ್ನು ಪ್ರಸಕ್ತ ಜಾಗತಿಕ ಮತ್ತು ಭಾರತದ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಸಮಗ್ರವಾಗಿ ಅರ್ಥೈಸಿಕೊಳ್ಳಬೇಕಿದೆ. ಅವರ “ಹಿಂದೂ ರಾಷ್ಟ್ರ’ ಕಲ್ಪನೆ ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸಮಗ್ರ ತತ್ವಗಳಾಗಿದೆ  ಎಂದು ಅದು ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next