Advertisement

WFI: ಕುಸ್ತಿಪಟುಗಳಿಗೆ ಡಬ್ಲ್ಯುಎಫ್ಐ ತಡೆ

10:19 PM Sep 28, 2024 | Team Udayavani |

ಹೊಸದಿಲ್ಲಿ: ಭಾರತ ಕುಸ್ತಿ ಸಂಸ್ಥೆ (ಡಬ್ಲ್ಯುಎಫ್ಐ) ಮತ್ತು ಕೇಂದ್ರ ಸರಕಾರದ ನಡುವೆ ತಿಕ್ಕಾಟ ಶುರುವಾಗಿದೆ. ಜೈಪುರದಲ್ಲಿ ನಡೆದ ಕೇಂದ್ರ ಸರಕಾರ ಬೆಂಬಲಿತ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ್ದ ಕುಸ್ತಿಪಟುಗಳಿಗೆ ಮುಂದಿನ ತಿಂಗಳು ನಡೆಯುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ಅರ್ಹತಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿದೆ.

Advertisement

ಡಬ್ಲ್ಯುಎಫ್ಐ ನೇತೃತ್ವದಲ್ಲಿ ಪುಣೆಯಲ್ಲಿ ಮತ್ತೂಂದು ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ನಡೆದಿತ್ತು. ಆದರೆ ಈ ಕೂಟಕ್ಕೆ ಕೇಂದ್ರ ಸರಕಾರದ ಮಾನ್ಯತೆ ಇರಲಿಲ್ಲ. ಆದರೂ ಪುಣೆಯಲ್ಲಿ ಪದಕ ಗೆದ್ದ ಕುಸ್ತಿಪಟುಗಳಿಗೆ ಅ. 7ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಡಬ್ಲ್ಯುಎಫ್ಐ ಹಸಿರು ನಿಶಾನೆ ನೀಡಿದೆ. ಹೀಗಾಗಿ ಡಬ್ಲ್ಯುಎಫ್ಐ ಮತ್ತು ಕೇಂದ್ರ ಸರಕಾರದ ಮಧ್ಯೆ ತಿಕ್ಕಾಟ ಶುರುವಾದಂತಿದೆ.

ವಿಶ್ವ ಚಾಂಪಿಯನ್‌ಶಿಪ್‌ ಕೂಟ ಅ. 28ರಂದು ಅಲೆºàನಿಯಾದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next