Advertisement

ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಹೋಗುವುದು ತರವೇ?

11:15 PM Nov 16, 2019 | Lakshmi GovindaRaju |

ಹುಣಸೂರು: ಸಿದ್ದರಾಮಯ್ಯ ಅವರು ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ.ಟೀಮ್‌ ಎನ್ನುತ್ತಾ ಕೋಮುವಾದಿಗಳೆಂದು ಬಿಂಬಿಸುತ್ತಿದ್ದರು. ಇದೀಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷವು ಪ್ರಖರ ಹಿಂದುತ್ವದ ವಿಚಾರಧಾರೆಯುಳ್ಳ ಶಿವಸೇನೆ ಜೊತೆ ಸೇರಿ ಸರ್ಕಾರ ರಚಿಸಲು ಹೊರಟಿದೆ. ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

Advertisement

ನಗರದಲ್ಲಿ ಶನಿವಾರ ಜೆಡಿಎಸ್‌ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ “ಒನ್‌ ಬೈಟು ತ್ರಿ’ ಸರ್ಕಾರ ರಚನೆಯಾಗುತ್ತಿದೆ. ಹಾಗಿದ್ದರೆ, ಚುನಾವಣಾ ಪೂರ್ವದಲ್ಲೇ ಶಿವಸೇನೆಯೊಂದಿಗೆ ಸೇರಿ “ಒನ್‌ ಬೈಟು’ ಮಾಡಿಕೊಳ್ಳಬಹುದಿತ್ತು ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next