Advertisement

ಗೋವಾ: ಶಾಸಕರು ಪಕ್ಷಾಂತರಗೊಳ್ಳುವ ಭೀತಿ; ಶಾಸಕಾಂಗ ಸಭೆ ನಡೆಸಿದ ಕಾಂಗ್ರೆಸ್‌

01:16 PM Jul 12, 2022 | Team Udayavani |

ಪಣಜಿ: ದೇಶದ ಕೆಲ ಪಕ್ಷಗಳು ಕಾಂಗ್ರೆಸ್‌ ಪಕ್ಷವನ್ನು ಕೊನೆಗಾಣಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ ಎಂದು ಕಾಂಗ್ರೆಸ್‌ ನಾಯಕ ಮುಕುಲ್ ವಾಸ್ನಿಕ್ ಹೇಳಿದರು.

Advertisement

ಗೋವಾದಲ್ಲಿ ಕಾಂಗ್ರೆಸ್‌ ಶಾಸಕರು ಪಕ್ಷಾಂತರಗೊಳ್ಳುವ ಭೀತಿಯ ಹಿನ್ನೆಲೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ಮುಕುಲ್ ವಾಸ್ನಿಕ್ ಮತ್ತು ಗೋವಾ ಕಾಂಗ್ರೆಸ್‌ ಪ್ರಭಾರ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ಮುಕುಲ್ ವಾಸ್ನಿಕ್ ಮಾತನಾಡಿ, ಗೋವಾದ ಕಾಂಗ್ರೆಸ್‌ ಶಾಸಕರು ಇತರ ಪಕ್ಷಗಳ ಒತ್ತಡದ ಆಮಿಷಕ್ಕೊಳಗಾಗದೆ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠೆಯಿಂದಿರಬೇಕು. ಈ ಕುರಿತಂತೆ ದೆಹಲಿಯಲ್ಲಿರುವ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು. ಪಕ್ಷದ ವರಿಷ್ಠರು ಗೋವಾದ ಸದ್ಯದ ವಿದ್ಯಮಾನದ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರದೇಶಾಧ್ಯಕ್ಷ ಅಮಿತ್ ಪಾಟಕರ್, ಶಾಸಕ ಮೈಕಲ್ ಲೋಬೊ, ದಿಲಾಯಲಾ ಲೋಬೊ, ಕೇದಾರ್ ನಾಯ್ಕ, ರಾಜೇಶ್ ಫಳದೇಸಾಯಿ, ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next