Advertisement

ಭ್ರಷ್ಟಾಚಾರಿಗಳು ಈಗ ತೊಲಗಿದ್ದಾರೆ: ಎಂಜಿಪಿಗೆ ಗೋವಾ ಸಿಎಂ ಸಾವಂತ್‌ ಟಾಂಗ್‌

12:15 PM Apr 13, 2019 | Sathish malya |

ಪಣಜಿ : ‘ಭ್ರಷ್ಟಾಚಾರದಲ್ಲಿ ತೊಡಗಿದ್ದವರು ಈಗ ತೊಲಗಿದ್ದಾರೆ’ ಎಂದು ಹೇಳುವ ಮೂಲಕ ಗೋವೆಯ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ತನ್ನ ಪರಿತ್ಯಕ್ಷ ಮಿತ್ರ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ)ಕ್ಕೆ ಮುಸುಕಿನೊಳಗಿನ ಗುದ್ದು ನೀಡಿದ್ದಾರೆ.

Advertisement

ಶಿರೋಡ ವಿಧಾನಸಭಾ ಕ್ಷೇತ್ರದಲ್ಲಿ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಸಿಎಂ ಸಾವಂತ್‌ ಅವರು ಎಂಜಿಪಿ ಭ್ರಷ್ಟಾಚಾರದಲ್ಲಿ ನಿರತವಾಗಿತ್ತು ಎಂಬುದನ್ನು ಸೂಚ್ಯವಾಗಿ ಹೇಳಿದರು.

ಗೋವೆಯಲ್ಲಿನ ಲೋಕಸಭಾ ಚುನಾವಣೆಯಲ್ಲಿ ಎಂಜಿಪಿ, ಕಾಂಗ್ರೆಸ್‌ಗೆ ಬೆಂಬಲ ಪ್ರಕಟಿಸಿದ ತಾಸುಗಳ ಬಳಿಕ ಸಿಎಂ ಸಾವಂತ್‌ ಅವರು ಎಂಜಿಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next