Advertisement

ಆದಿವಾಸಿಗಳಿಗೆ ಅರಣ್ಯ ಹಕ್ಕು ಖಾಯ್ದೆಯಡಿ ಜಮೀನು ಹಸ್ತಾಂತರ ಪ್ರಕ್ರಿಯೆ ಆರಂಭ :ಸಾವಂತ್

08:10 PM Aug 10, 2021 | Team Udayavani |

ಪಣಜಿ: ಆದಿವಾಸಿಗಳಿಗೆ (ವನವಾಸಿಗಳಿಗೆ) ಅರಣ್ಯ ಹಕ್ಕು ಖಾಯ್ದೆಯಡಿಯಲ್ಲಿ ಜಮೀನು ಹಸ್ತಾಂತರಿಸುವ ಪ್ರಕ್ರಿಯೆ ಆರಂಭಗೊಂಡಿದ್ದು ಈ ಗಾಗಲೇ ಸುಮಾರು 50 ಅರ್ಜಿಗಳ ಪರಿಶೀಲನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು. ನಾನೇ ಸ್ವತಃ ಈ ಕುರಿತು ಲಕ್ಷ್ಯವಹಿಸುತ್ತಿದ್ದು ಎರಡೂ ಜಿಲ್ಲಾಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.

Advertisement

ಮಡಗಾಂವನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಸಾವಂತ್- ರಾಜ್ಯದ ಸಾಂಗೆ, ಕೆಫೆ, ಧಾರಾಬಾಂದೋಡಾ, ಕಾಣಕೋಣ, ಪೆಡ್ನೆ ಭಾಗದಿಂದ ಬಂದಿರುವ ಅರ್ಜಿಗಳ ಪೈಕಿ ಶೇ 50 ರಷ್ಟು ಅರ್ಜಿಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಖಾಯ್ದೆಯ ಪ್ರಕಾರ ಇಂತಹ ಅರ್ಜಿಗಳು ಗ್ರಾಮಸಭೆಯ ಮಾಧ್ಯಮದ ಮೂಲಕ ಬರಬೇಕು, ಮತ್ತು ಹಲವು ಸರ್ಕಾರಿ ಪ್ರಕ್ರಿಯೆ ನಡೆಸಬೇಕಾಗಿರುತ್ತದೆ. ಆದರೂ ಕೂಡ ನಮ್ಮ ಬಳಿ ಎಷ್ಟು ತ್ವರಿತ ಗತಿಯಲ್ಲಿ ಸಾಧ್ಯವಿದೆಯೋ ಅಷ್ಟು ತ್ವರಿತವಾಗಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.

ಇದನ್ನೂ ಓದಿ :ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ವಾರಾಂತ್ಯ ಹಾಗೂ ರಜೆ ದಿನದಂದು ಪ್ರವಾಸಿಗರಿಗೆ ನಿರ್ಬಂಧ

Advertisement

Udayavani is now on Telegram. Click here to join our channel and stay updated with the latest news.

Next