Advertisement

Surathkal ಗೋವಾದ ಉನ್ನತ ಶಿಕ್ಷಣ ಮಂಡಳಿ ವೈಸ್‌ ಚೇರ್ಮನ್‌ ಆಗಿ ಡಾ| ಮುಗೇರಾಯ

11:50 PM Dec 19, 2023 | Team Udayavani |

ಸುರತ್ಕಲ್‌: ಗೋವಾ ಎನ್‌ಐಟಿಯ ಮಾಜಿ ನಿರ್ದೇಶಕ ಕನ್ನಡಿಗ ಡಾ| ಗೋಪಾಲ್‌ ಮುಗೇರಾಯ ಮುಂಡ್ಕೂರು ಅವರನ್ನು ಗೋವಾ ರಾಜ್ಯದ ಶಿಕ್ಷಣ ಇಲಾಖೆಯು ಉನ್ನತ ಶಿಕ್ಷಣ ಮಂಡಳಿ ಯ ವೈಸ್‌ ಚೇರ್ಮನ್‌ ಆಗಿ 5 ವರ್ಷಗಳ ಅವಧಿಗೆ ನೇಮಿಸಿದೆ. ಮಂಡಳಿಗೆ ಆಯ್ಕೆಯಾದ ಪ್ರಥಮ ಕನ್ನಡಿಗ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.

Advertisement

ಪ್ರಸ್ತುತ ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿದ್ದು, ಈ ಹಿಂದೆ ಸುರತ್ಕಲ್‌ ಎನ್‌ಐಟಿಕೆಯ ಪ್ರೊಫೆಸರ್‌, ಡೀನ್‌ ಆಗಿದ್ದರು. ಬಳಿಕ ಎನ್‌ಐಟಿ ಅಗರ್ತಲಾ, ಹೆಚ್ಚುವರಿ ಯಾಗಿ ಮಿಜೋರಾಂನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ದ್ದಾರೆ. 2018ರಲ್ಲಿ ಮಾಸ್ಕೋದಲ್ಲಿ ನಡೆದಬ್ರಿಕ್ಸ್‌ ಸಮ್ಮೇಳನ, 2016ರಲ್ಲಿ ರಾಷ್ಟ್ರಾ ಧ್ಯಕ್ಷರ ತಂಡದೊಂದಿಗೆ ಚೀನಕ್ಕೆ ಅಧಿಕೃತ ಪ್ರವಾಸ, ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಎನ್‌ಐಟಿಕೆಯಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌, ಎಂ.ಟೆಕ್‌ ಪದವಿ, ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ)ನಿಂದ ಪಿಎಚ್‌ಡಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next