Advertisement

ಗೋವಾ ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ, ಯಾವುದೇ ಮತಬೇಧವಿಲ್ಲ: ಸದಾನಂದ ತಾನಾವಡೆ

03:46 PM Mar 17, 2022 | Team Udayavani |

ಪಣಜಿ: ಗೋವಾ ಬಿಜೆಪಿಯಲ್ಲಿ ಯಾವುದೇ ಮತಬೇಧವಿಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆಯೂ ಯಾವುದೇ ಗೊಂದಲವಿಲ್ಲ, ಎಲ್ಲರೂ ಒಟ್ಟಾಗಿದ್ದಾರೆ. ಕೇಂದ್ರ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸಂಪುಟ ವಿಸ್ತರಣೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಹೇಳಿದ್ದಾರೆ.

Advertisement

ಗೋವಾ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೇಂದ್ರ ನಾಯಕರು ಪ್ರಮೋದ ಸಾವಂತ್ ರವರನ್ನು ಆಯ್ಕೆ ಮಾಡಿದ್ದರೂ ಕೂಡ ಶಾಸಕ ವಿಶ್ವಜಿತ್ ರಾಣೆ ಬಂಡಾಯದ ಸಾಧ್ಯತೆ ಬಗ್ಗೆ ಇನ್ನೂ ಚರ್ಚೆ ಮುಂದುವರೆದಿದೆ. ಗೋವಾ ಬಿಜೆಪಿಯು ಈಗಾಗಲೇ ಶೇ 80 ಕ್ಕೂ ಹೆಚ್ಚು ಸಂಪುಟ ಸ್ಥಾನಗಳ ಆಯ್ಕೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋವಾದಲ್ಲಿ ಹೋಳಿ ಹಬ್ಬದ ನಂತರ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಮಾರ್ಚ್ 21 ರ ನಂತರ ಬಿಜೆಪಿ ಕೇಂದ್ರ ವೀಕ್ಷಕರು ಗೋವಾಕ್ಕೆ ಆಗಮಿಸಲಿದ್ದು ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಕೇಂದ್ರ ನಾಯಕರೇ ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ

Advertisement

Udayavani is now on Telegram. Click here to join our channel and stay updated with the latest news.

Next