Advertisement

ಜಲಪಾತ ನೋಡಲು ಹೋಗಿ ಜಾರಿ ಬಿದ್ದು ಸಾವು

11:17 AM Nov 23, 2021 | Team Udayavani |

ಕುಷ್ಟಗಿ: ಜಲಪಾತ ನೋಡಲು ಹೋಗಿ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಕುಷ್ಟಗಿ ತಾಲೂಕಿನ ಕಬ್ವರಗಿಯ ಕಪಿಲತೀರ್ಥದಲ್ಲಿ ನಡೆದಿದೆ.

Advertisement

ಮೃತ ವ್ಯಕ್ತಿ ಹುಲಗಪ್ಪ ನಾಗಪ್ಪ ವಡ್ಡರ (27) ಎಂದು ಗುರುತಿಸಲಾಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕಲ್ಲೂರು ನಿವಾಸಿಯಾಗಿದ್ದು ಸದ್ಯ ಯಲಬುರ್ಗಾ ತಾಲೂಕು ಮುಧೋಳ ಗ್ರಾಮದಲ್ಲಿ ವಾಸವಾಗಿದ್ದರು. ಪತ್ನಿ ಭಾಗ್ಯ, ಮಗಳು ಹನುಮಸಾಗರದ ದೊಡ್ಡಮ್ಮನ ಮನೆಗೆ ಆಗಮಿಸಿದ್ದರು.  ಈ ವೇಳೆ ಕುಟುಂಬ ಸಮೇತರಾಗಿ ಕಬ್ಬರಗಿ ಕಪಿಲತೀರ್ಥ ಜಲಪಾತಕ್ಕೆ ತೆರಳಿದ್ದರು.

ಜಲಪಾತ ನೀರು ಬೀಳುವ ಸ್ಥಳದಲ್ಲಿ ನೀರು ಕುಡಿಯಲು ಹೋಗಿದ್ದಾಗ, ಮೂರ್ಛೆ ರೋಗ ಬಂದು ಜಾರಿ ಬಿದ್ದಿದ್ದರಿಂದ ಚೂಪಾದ ಕಲ್ಲು ತಲೆಗೆ ತಾಗಿ ಗಂಭೀರ ಗಾಯಗೊಂಡಿದ್ದರು.  ಕೂಡಲೇ ಹನುಮಜಲಪಾತ ನೋಡಲು ಹೋಗಿ ಜಾರಿ ಬಿದ್ದು ಸಾವುಸಾಗರ ಸರ್ಕಾರಿ ಆಸ್ಪತ್ರೆ ಗೆ ಕರೆ ತರುವಾಗ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.

ಇದನ್ನೂ ಓದಿ:ಕಚ್ಚಿದ ಹಾವನ್ನು ಜೊತೆಯಲ್ಲೇ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿ

ಮೃತ ಹುಲಗಪ್ಪ ಪತ್ನಿ ಭಾಗ್ಯ ದೂರಿನ ಮೇರೆಗೆ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸೈ ಅಶೋಕ ಬೇವೂರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next