Advertisement

MAHE: ಫೋಟೊಮಾಡ್ಯುಲೇಶನ್‌ ಥೆರಪಿ ಮಾಹೆ ವಿ.ವಿ.ಗೆ ಜಾಗತಿಕ ಸಂಘಟನೆಯ ಮಾನ್ಯತೆ

12:32 AM Nov 03, 2023 | Team Udayavani |

ಮಣಿಪಾಲ: ಫೋಟೊಮಾಡ್ಯುಲೇಶನ್‌ ಥೆರಪಿ (ಪಿಬಿಎಂ) ಕ್ಷೇತ್ರದ ಮಹತ್ವಪೂರ್ಣ ಸಾಧನೆಗಾಗಿ ಫೋಟೊಮಾಡ್ಯುಲೇಶನ್‌ ಥೆರಪಿಯ ಜಾಗತಿಕ ಸಂಘಟನೆ (ಡಬ್ಲೂéಎಎಲ್‌ಟಿ)ಯು ಮಾಹೆ ವಿ.ವಿ.ಯ ಪಾದಚಿಕಿತ್ಸೆ ಹಾಗೂ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನ ಕೇಂದ್ರವನ್ನು ಶ್ರೇಷ್ಠ ಸಂಸ್ಥೆಯಾಗಿ ಮಾನ್ಯ ಮಾಡಿದೆ.

Advertisement

ಡಬ್ಲೂಎಎಲ್‌ಟಿಯ (ವಾಲ್ಟ್) ಸದಸ್ಯ ನಿರ್ದೇಶಕ ಡಾ| ಜಿ. ಅರುಣ್‌ ಮಯ್ಯ ಅವರು ಈ ಕ್ಷೇತ್ರದ ಮುಂಚೂಣಿ ಸಾಧಕರಾಗಿದ್ದು ಜಾಗತಿಕ ಮಾನ್ಯತೆ ದೊರಕಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಡಾ| ಮಯ್ಯ ಅವರ ಸಹಭಾಗಿತ್ವದ ಸಂಶೋಧನೆ, ವೈಜ್ಞಾನಿಕ ಸಂವಾದಗಳಿಗೆ ನೀಡಲಾದ ಮಹತ್ವದ ಕೊಡುಗೆಗಳು, ನೋವಿನ ನಿಭಾವಣೆ ಮತ್ತು ಕಾಯಿಲೆಯ ಸ್ಥಿತಿಗನುಗುಣವಾಗಿ ಅಂಗಾಂಶ ಚಿಕಿತ್ಸೆಗೆ ಸಂಬಂಧಿಸಿದ ಫೋಟೊಮಾಡ್ಯುಲೇಶನ್‌ ಥೆರಪಿಯಲ್ಲಿ ವಿಶೇಷ ಸುಧಾರಣೆಯನ್ನು ದಾಖಲಿಸಿವೆ. ಡಬ್ಲೂಎಎಲ್‌ಟಿಯ ಅಧ್ಯಕ್ಷ ಡಾ| ರೇನ್‌ಜಿàನ್‌ ಬೆನ್ಸಾಡೌನ್‌ ಅವರು ಮಾಹೆಯ ಪಾದಚಿಕಿತ್ಸೆ ಹಾಗೂ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನ ಕೇಂದ್ರವನ್ನು ಶ್ರೇಷ್ಠ ಫೋಟೊಮಾಡ್ಯುಲೇಶನ್‌ ಥೆರಪಿಯ ಕೇಂದ್ರವಾಗಿ ಅನುಮೋದಿಸಿದ್ದಾರೆ ಮತ್ತು ಡಾ| ಜಿ. ಅರುಣ್‌ ಮಯ್ಯ ಅವರನ್ನು ವಿಶೇಷ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಮಾಹೆ ಸಹ ಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಅವರು, ಕೇಂದ್ರದ ಸಾಧನೆಯನ್ನು ಶ್ಲಾ ಸಿ, ಪ್ರಸ್ತುತ ಲಭಿಸಿರುವ ಜಾಗತಿಕ ಮಾನ್ಯತೆಯು ಸಾಮಾಜಿಕ ಸ್ವಾಸ್ಥ್ಯಪಾಲನೆಯಲ್ಲಿ ಸಂಸ್ಥೆಯ ಬದ್ಧತೆ ಮತ್ತು ಪ್ರಾಧ್ಯಾಪಕರ ನಿರಂತರ ಸಂಶೋಧನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದರು.

ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಅವರು, ಕರ್ತವ್ಯದ ಬದ್ಧತೆಯಿಂದ ಜಾಗತಿಕ ಮಾನ್ಯತೆ ಪಡೆಯಲು ಸಾಧ್ಯವಾಗಿದೆ. ಮಾಹೆ ಘಟಕಕ್ಕೆ ದೊರೆತಿರುವ ಜಾಗತಿಕ ಮಾನ್ಯತೆಯು ಜನರ ಆರೋಗ್ಯಪಾಲನೆ ಕ್ಷೇತ್ರದಲ್ಲಿ ಇನ್ನಷ್ಟು ಕಾರ್ಯಸಾಧನೆಗೆ ಪ್ರೋತ್ಸಾಹವಾಗಿದೆ ಎಂದರು.

ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌, ಕುಲಸಚಿವ ಡಾ| ಗಿರಿಧರ ಕಿಣಿ, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ, ಮಾಹೆ ಸಿಒಒ ಡಾ| ಆನಂದ್‌ ವೇಣುಗೋಪಾಲ್‌, ಯುಎಸ್‌ಎ ವಾಲ್ಟ್ ಮಾಜಿ ಅಧ್ಯಕ್ಷ ಡಾ| ಪ್ರವೀಣ್‌ ಆರ್‌. ಅರನ್ಯ, ಡಾ| ಅರುಣ್‌ ಮಯ್ಯ, ಮಾಹೆ ಪಬ್ಲಿಕ್‌ ರಿಲೇಶನ್‌ ಡೆಪ್ಯೂಟಿ ಡೈರೆಕ್ಟರ್‌ ಸಚಿನ್‌ ಕಾರಂತ ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next