Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಜ್ಯೋತಿಷ್ಯ , ಶಾಸ್ತ್ರ ಬಹಳ ದಿನ ನಡೆಯುವುದಿಲ್ಲ. ಕೊನೆಯಲ್ಲಿ ಉಳಿಯುವುದು ಜನ ಬೆಂಬಲ ಮಾತ್ರ .ದೇಶವನ್ನು ಶಕ್ತಿಯಿಂದ ಜನರ ಬೆಂಬಲದಿಂದ ಕಟ್ಟಬಹುದು ಎಂದರು.
ಜೆಡಿಎಸ್ ಜಾತಿ ರಾಜಕಾರಣವನ್ನು ಮಾಡಿಕೊಳ್ಳುತ್ತಿದ್ದು, ಜಾತಿಯ ವಿಷ ಬೀಜವನ್ನು ಬಿತ್ತುತ್ತಿದೆ. ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಒಕ್ಕಲಿಗರು ಜೆಡಿಎಸ್ಗೆ ಮಾತ್ರ ಸೀಮಿತವಲ್ಲ. ಕಾಂಗ್ರೆಸ್ನಲ್ಲೂ ಇದ್ದಾರೆ,ಬಿಜೆಪಿಯಲ್ಲೂ ಎಸ್.ಎಂ.ಕೃಷ್ಣ ಅವರಂತಹ ಹಿರಿಯ ನಾಯಕರಿದ್ದಾರೆ. ಒಕ್ಕಲಿಗರೇನು ಜೆಡಿಎಸ್ ಪಕ್ಷವನ್ನು ದತ್ತು ಪಡೆದಿಲ್ಲ ಎಂದು ಕಿಡಿ ಕಾರಿದರು.