Advertisement

ರೇವಣ್ಣ ಅವರಿಗೆ ಲಿಂಬೆ ಹಣ್ಣು ಚಿಹ್ನೆಯಾಗಿ ಕೊಟ್ಟರೆ ಒಳ್ಳೆಯದು: ಆರ್‌. ಅಶೋಕ್‌

09:03 AM Apr 06, 2019 | Team Udayavani |

ಹಾಸನ: ಸಚಿವ ಎಚ್‌.ಡಿ.ರೇವಣ್ಣ ಜ್ಯೋತಿಷ್ಯ, ಶಾಸ್ತ್ರದ ಆಧಾರದಲ್ಲಿಯೇ ದೇಶ ನಡೆಸುವ ಭ್ರಮೆಯಲ್ಲಿದ್ದಾರೆ. ಅವರಿಗೆ ಲಿಂಬೆ ಹಣ್ಣನ್ನೇ ಚಿಹ್ನೆಯಾಗಿ ನೀಡಿದರೆ ಒಳ್ಳೆಯದಿತ್ತು ಎಂದು ಬಿಜೆಪಿ ಶಾಸಕ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ಜ್ಯೋತಿಷ್ಯ , ಶಾಸ್ತ್ರ ಬಹಳ ದಿನ ನಡೆಯುವುದಿಲ್ಲ. ಕೊನೆಯಲ್ಲಿ ಉಳಿಯುವುದು ಜನ ಬೆಂಬಲ ಮಾತ್ರ .ದೇಶವನ್ನು ಶಕ್ತಿಯಿಂದ ಜನರ ಬೆಂಬಲದಿಂದ ಕಟ್ಟಬಹುದು ಎಂದರು.

ಜೆಡಿಎಸ್‌ ಪಕ್ಷವನ್ನು ಒಕ್ಕಲಿಗರು ದತ್ತು ಪಡೆದಿಲ್ಲ
ಜೆಡಿಎಸ್‌ ಜಾತಿ ರಾಜಕಾರಣವನ್ನು ಮಾಡಿಕೊಳ್ಳುತ್ತಿದ್ದು, ಜಾತಿಯ ವಿಷ ಬೀಜವನ್ನು ಬಿತ್ತುತ್ತಿದೆ. ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಒಕ್ಕಲಿಗರು ಜೆಡಿಎಸ್‌ಗೆ ಮಾತ್ರ ಸೀಮಿತವಲ್ಲ. ಕಾಂಗ್ರೆಸ್‌ನಲ್ಲೂ ಇದ್ದಾರೆ,ಬಿಜೆಪಿಯಲ್ಲೂ ಎಸ್‌.ಎಂ.ಕೃಷ್ಣ ಅವರಂತಹ ಹಿರಿಯ ನಾಯಕರಿದ್ದಾರೆ. ಒಕ್ಕಲಿಗರೇನು ಜೆಡಿಎಸ್‌ ಪಕ್ಷವನ್ನು ದತ್ತು ಪಡೆದಿಲ್ಲ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next