Advertisement

ಬದಿಯಡ್ಕ: ಚರಂಡಿಗೆ ವ್ಯಾನ್‌  ಮಗುಚಿ ಯುವತಿ ಸಾವು

12:16 PM Apr 25, 2017 | Team Udayavani |

ಬದಿಯಡ್ಕ: ಬದಿಯಡ್ಕ ಪೊಲೀಸ್‌ ಠಾಣೆಯ ಬಳಿ  ಸೋಮವಾರ ಮುಂಜಾನೆ ವ್ಯಾನ್‌ ಮಗುಚಿ ಬಿದ್ದು ಪ್ಲಸ್‌ ವನ್‌ ವಿದ್ಯಾರ್ಥಿನಿ ಯೋರ್ವಳು ಸಾವಿಗೀಡಾದ ಘಟನೆ ಸಂಭವಿಸಿದೆ. ಮೂಲತಃ ಪಳ್ಳತ್ತಡ್ಕ ಬಳಿಯ ಬೈಕುಂಜೆ ನಿವಾಸಿ, ಪ್ರಸ್ತುತ ಬೇಳ ಸಮೀಪ ಬಂಟರಡ್ಕದಲ್ಲಿ ವಾಸ್ತವ್ಯವಿರುವ ಶೇಷಪ್ಪ ನಾಯ್ಕ ಅವರ ಪುತ್ರಿ ಅರ್ಪಿತಾ (17) ಸಾವಿಗೀಡಾದವ‌ರು. ಆಕೆ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯರ್‌ ಸೆಕೆಂಡರಿ ಶಾಲೆಯ ಪ್ಲಸ್‌ ವನ್‌ ವಿದ್ಯಾರ್ಥಿನಿಯಾದ್ದರು.

Advertisement

ಸೋಮವಾರ ಮುಂಜಾನೆ 3.30ಕ್ಕೆ ಬದಿಯಡ್ಕ ಪೊಲೀಸ್‌ ಠಾಣೆ ಬಳಿಯ ಕುಂಬಳೆ-ಬದಿಯಡ್ಕ ರಸ್ತೆ ಬದಿಯ ಚರಂಡಿಗೆ ವ್ಯಾನ್‌ ಮಗುಚಿ ಬಿತ್ತು. ವ್ಯಾನ್‌ನಲ್ಲಿದ್ದ ಅರ್ಪಿತಾ ಅವರ ತಾಯಿ ಸರಸ್ವತಿ ಹಾಗೂ ಸಹೋದರ ಅಜಯ ಕುಮಾರ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚೆಂಗಳದ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಪುತ್ತೂರು ಬಳಿಯ ಕುಂಬ್ರ ಸಮೀಪ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳುತ್ತಿದ್ದಾಗ ವ್ಯಾನ್‌ ಅಪಘಾತಕ್ಕೀಡಾಗಿದೆ.

ಚರಂಡಿಗೆ ಉರುಳಿದಾಗ ವ್ಯಾನ್‌ನಿಂದ ಹೊರಗೆಸೆಯಲ್ಪಟ್ಟ ಅರ್ಪಿತಾ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ತತ್‌ಕ್ಷಣ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ದಾರಿ ಮಧ್ಯೆ ಸಾವು ಸಂಭವಿಸಿತು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next