Advertisement

Mudhol: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ… ಚಿಂಚಖಂಡಿ ಸೇತುವೆ ಸಂಚಾರ ಸ್ಥಗಿತ ಭೀತಿ

01:39 PM Jul 29, 2024 | Team Udayavani |

ಮುಧೋಳ: ಜಮಖಂಡಿ‌-ಧಾರವಾಡ ರಾಜ್ಯ ಹೆದ್ದಾರಿಯ ಚಿಂಚಖಂಡಿ ಬಳಿಯಲ್ಲಿ ಸೇತುವೆ ಮೇಲೆ ಘಟಪ್ರಭಾ ನದಿ ನೀರು ಹರಿಯುತ್ತಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಸಂಚಾರ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮಧ್ಯಾಹ್ನ 12:30ರ ವೇಳೆಗೆ ಸೇತುವೆ ಮೇಲೆ ನದಿನೀರು ಹರಿಯಲು ಆರಂಭಿಸಿದ್ದು ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಲಿದೆ.

ಜಮಖಂಡಿ, ಬಾಗಲಕೋಟೆ, ಹುಬ್ಬಳ್ಳಿ- ಧಾರವಾಡ ಹಾಗೂ ಬೆಳಗಾವಿ ನಗರಗಳಿಗೆ ಸಂಪರ್ಕ ಕಲಸಪಿಸುವ ರಾಜ್ಯ ಹೆದ್ದಾರಿಯಾಗಿರುವ ಕಾರಣ ಸಂಚಾರ ಸ್ಥಗಿತಗೊಂಡರೆ ರಾಜ್ಯ ಹಾಗೂ ಅಂತಾರಾಜ್ಯ ಮಾರ್ಗದಲ್ಲಿ ಸಂಚರಿಸು ಬಸ್ ಗಳು, ಲಾರಿಗಳೂ ಸೇರಿದಂತೆ ಎಲ್ಲ ವಿಧದ ವಾಹನಗಳು ಅನ್ಯ ಮಾರ್ಗ ಬಳಬೇಕಾಗುವುದು.

ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ನದಿ ನೀರಿನಲ್ಲೇ ನಡೆದು ಮುಕ್ತಿಧಾಮದಲ್ಲಿ ಕಾರ್ಯ ಮುಗಿಸಿದ ಕುಟುಂಬ

Advertisement

Udayavani is now on Telegram. Click here to join our channel and stay updated with the latest news.

Next