Advertisement

ಕಟ್ಟಡ ಕಟ್ಟಿಸಲು ಎನ್‌ಒಸಿ ಪಡೆಯುವುದು ಅಗತ್ಯ: ಶಾಸಕ ನಡಹಳ್ಳಿ

04:28 PM Sep 15, 2020 | Suhan S |

ಮುದ್ದೇಬಿಹಾಳ: ತಾಳಿಕೋಟೆ, ನಾಲತವಾಡ,ಮುದ್ದೇಬಿಹಾಳ ಪಟ್ಟಣಗಳಲ್ಲಿ ಪಿಡಬ್ಲೂಡಿ ರಸ್ತೆ ಅಕ್ಕಪಕ್ಕ ಕಟ್ಟಡ ಕಟ್ಟಲು ಪುರಸಭೆ, ಪಟ್ಟಣ ಪಂಚಾಯಿತಿಯವರು ಇನ್ನು ಮುಂದೆ ಕಡ್ಡಾಯವಾಗಿ ಪಿಡಬ್ಲೂಡಿ ಎನ್‌ಒಸಿ ಪಡೆದುಕೊಂಡೇ ಅನುಮತಿ ಕೊಡಬೇಕು. ಹೆಸ್ಕಾಂನವರು ವಿದ್ಯುತ್‌ ಸಂಪರ್ಕ ಕೊಡಲು ಸಹಿತ ಇದೇ ಪದ್ಧತಿ ಪಾಲಿಸಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಸೂಚಿಸಿದ್ದಾರೆ.

Advertisement

ಇಲ್ಲಿನ ತಮ್ಮ ಗೃಹಕಚೇರಿ ದಾಸೋಹ ನಿಲಯದಲ್ಲಿ ಸೋಮವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಅನೇಕರುಪಿಡಬ್ಲೂಡಿ ರಸ್ತೆ ಅತಿಕ್ರಮಿಸಿ ಕಟ್ಟಡ ಕಟ್ಟಿಕೊಂಡಿದ್ದಾರೆ.ಇದರಿಂದ ರಸ್ತೆಗಳ ಅಭಿವೃದ್ಧಿಗೆ ತೊಡಕಾಗುತ್ತಲಿದೆ. ಇಂಥವರಿಗೆ ನೋಟಿಸ್‌ ಕೊಡಬೇಕು. ಇನ್ನು ಮುಂದೆ ಪುರಸಭೆ, ಪಟ್ಟಣ ಪಂಚಾಯತ್‌, ಹೆಸ್ಕಾಂನವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

ಮುದ್ದೇಬಿಹಾಳ ಪಟ್ಟಣದಲ್ಲಿ ಬಸವೇಶ್ವರವೃತ್ತದಿಂದ ಆಲಮಟ್ಟಿ ರಸ್ತೆ ಎರಡೂ ಕಡೆ ಕಟ್ಟಡಗಳು ತಲೆ ಎತ್ತಿವೆ. ಪಿಡಬ್ಲೂಡಿ ಎನ್‌ಒಸಿ ಇಲ್ಲದೆ ಇಂಥವರಿಗೆ ಹೇಗೆ ಎನ್‌ಒಸಿ, ವಿದ್ಯುತ್‌ ಕನೆಕ್ಷನ್‌ ಕೊಟ್ರಿ ಎಂದು ಪುರಸಭೆ ಕಂದಾಯ ಅ ಧಿಕಾರಿ ಭಾರತಿ ಮಾಡಗಿ, ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ರಸ್ತೆ ಬದಿ ಕಟ್ಟಡಗಳಿಗೆ ಪಿಡಬ್ಲೂಡಿ ಎನ್‌ಒಸಿ ಅಗತ್ಯ ಎನ್ನುವ ಪರಿಜ್ಞಾನ ಇಲ್ಲವೇ. ಆಲಮಟ್ಟಿ ರಸ್ತೆ ಪರಿಸ್ಥಿತಿ ಹೇಗಿದೆ ಗೊತ್ತಾ. ನಾನು ಬಂದು ವಾಚಮನ್‌ ಕೆಲಸ ಮಾಡಬೇಕಾ. ನಾವಿಲ್ಲಿ ಮೀಟಿಂಗ್‌ ಮಾಡಿ ಟೈಟ್‌ ಮಾಡಿದರೆ ನೀವಲ್ಲಿ ಬೇಕಾಬಿಟ್ಟಿ ನಡೆದುಕೊಳ್ಳೋದಾ. ಎರಡು ವರ್ಷದಿಂದ ಹೇಳ್ತಿದ್ದೇನೆ. ಇನ್ನು ಮುಂದೆ ಸಹಿಸೊಲ್ಲ. ಹಣ ಕೊಟ್ರೆ ಎನ್‌ಒಸಿ ಕೊಡ್ತೀರಿ. ಪದ್ಧತಿ ಅನ್ನೋದೆ ಇಲ್ಲವಾಗಿದೆ. ಅದ್ಹೇಗೆ ಎನ್‌ಒಸಿ ಕೊಡದೆ ಕಟ್ಟಡ ಕಟ್ಟಿದ್ದಾರೆ. ಯಾರ್ಯಾರು ಎನ್‌ಒಸಿಗೆ ಸಹಿ ಮಾಡಿರ್ತಿರಿ ಅವರೆಲ್ಲ ಮನೆಗೆ ಹೋಗ್ತಿàರಿ. ಪಟ್ಟಣ ವ್ಯಾಪ್ತಿ ಹೊಂದಿರುವ ಹೆಸ್ಕಾಂನ ಸೆಕ್ಷನ್‌ ಅ ಧಿಕಾರಿಗೆ ನೋಟಿಸ್‌ ಕೊಡಿ ಎಂದು ಖಾರವಾಗಿ ಹೇಳಿದರು.

ಪೆನ್ಶನ್‌, ರೇಷನ್‌ ಕೊಡಿ: 60 ವರ್ಷ ಮೇಲ್ಪಟ್ಟವರಿಗೆ ಆಧಾರ್‌ ಕಾರ್ಡ್‌ ಆಧಾರದ ಮೇಲೆ ಪೆನ್ಶನ್‌ ಮಂಜೂರು ಮಾಡಬೇಕು, ಬಡವರಿಗೆ ಪಡಿತರ ಕಾರ್ಡ್‌ ಇಲ್ಲದಿದ್ದರೂ ಅವರ ಆಧಾರ್‌ ಕಾರ್ಡ್‌ ಮೇಲೆ ರೇಷನ್‌ ಕೊಡಬೇಕು ಎಂದು ಮುದ್ದೇಬಿಹಾಳ ಪ್ರಭಾರ ಹೊಂದಿರುವ ತಾಳಿಕೋಟೆ ತಹಶೀಲ್ದಾರ್‌ ಅನಿಲಕುಮಾರ ಢವಳಗಿಗೆ ಶಾಸಕರು ಸೂಚಿಸಿದರು.

ನೈಜ ಸಮೀಕ್ಷೆ ಮಾಡಿ: ಮಳೆಯಿಂದ ಬೆಳೆ ಹಾನಿ ಆಗಿದ್ದರೆ, ಮನೆ ಬಿದ್ದಿದ್ದರೆ ಅಂಥವುಗಳ ನೈಜ ಸಮೀಕ್ಷೆ ನಡೆಸಬೇಕು. ಕೃಷಿ, ತೋಟಗಾರಿಕೆ, ಪುರಸಭೆ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಿಗರು ಕಚೇರಿಯಲ್ಲಿ ಕುಳಿತು ವರದಿ ತಯಾರಿಸಬಾರದು.ಸ್ಥಳಕ್ಕೆ ಹೋಗಿ ಪರಿಶೀಲಿಸಿರುವ ಆಯಾ ಊರಿನ ಜಮೀನು, ಸರ್ವೇ ನಂಬರ್‌, ಜಮೀನು ಮಾಲೀಕನ ಹೆಸರು, ಹಾನಿಯಾದ ಬೆಳೆ, ಮನೆಯ ಬಳಿ ರೈತನ, ಮಾಲೀಕನ ಫೋಟೊ ಸಮೇತ ವರದಿ ತಯಾರಿಸಿ ನನಗೆ ಕೊಡಬೇಕು ಎಂದು ಶಾಸಕರು ಸೂಚಿಸಿದರು.

Advertisement

ವಿಮೆ ಜಾಗೃತಿ ಮೂಡಿಸಿ: ಮಳೆಯಿಂದಾಗಿ ಸೂರ್ಯಕಾಂತಿ, ಈರುಳ್ಳಿ ಬೆಳೆಗೆ ಸಮಸ್ಯೆ ಆಗಿದೆ. ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆ ಅಡಿ ಈರುಳ್ಳಿ ಸೇರ್ಪಡೆ ಬಗ್ಗೆ ರೈತರಿಗೆ ತಿಳಿ ಹೇಳಿ ವಿಮೆ ಮಾಡಿಸುವಂತೆ ಮನವೊಲಿಸಬೇಕು. ತೋಟಗಾರಿಕೆ ಬೆಳೆಗಾರರ ಮಾಹಿತಿ, ಮೊಬೈಲ್‌ ನಂಬರ್‌

ಸಂಗ್ರಹಿಸಿ ಇಟ್ಟುಕೊಂಡು ಕಾಲಕಾಲಕ್ಕೆ ಮಾಹಿತಿ ಕೊಡುತ್ತಿರಬೇಕು ಎಂದು ಶಾಸಕರು ಹೇಳಿದಾಗ ಮಾತನಾಡಿದ ತೋಟಗಾರಿಕೆ ಅಧಿಕಾರಿ ಢವಳಗಿ, ರೂಢಗಿ ಭಾಗದಲ್ಲಿ ಹೆಚ್ಚು ಈರುಳ್ಳಿಗೆ ಹಾನಿಯಾಗಿದೆ. ದ್ರಾಕ್ಷಿ ಬೆಳೆಯೂ ಸಮಸ್ಯೆಗೀಡಾಗಿದೆ. 63 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆದಿದ್ದು 23 ರೈತರು ಇದಕ್ಕಾಗಿ ವಿಮೆ ಕಟ್ಟಿದ್ದಾರೆ ಎಂದರು.

ಇದೇ ವೇಳೆ ಶಾಸಕರು ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಮಳೆಹಾನಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿ ಕಡ್ಡಾಯವಾಗಿಪಾಲಿಸುವಂತೆ ತಿಳಿ ಹೇಳಿದರು. ತಾಪಂ ಇಒ ಶಶಿಕಾಂತ ಶಿವಪುರೆ ಸೇರಿದಂತೆ ಹಲವು ಅಧಿಕಾರಿಗಳು, ಪ್ರತಿನಿಧಿ  ಗಳು ಪಾಲ್ಗೊಂಡಿದ್ದರು.

ಮುದ್ದೇಬಿಹಾಳದ ಅಂಬೇಡ್ಕರ್‌ ಸರ್ಕಲ್‌ನಿಂದ ಬಿದರಕುಂದಿ ಕ್ರಾಸ್‌ವರೆಗೆ ವಿಜಯಪುರ ರಸ್ತೆಯನ್ನು 44 ಮೀ. ಅಗಲದ ಡಬಲ್‌ ರೋಡ್‌ ಮಾಡಲಾಗುತ್ತದೆ. ರಸ್ತೆಯ ಎರಡೂ ಬದಿಯ ಅತಿಕ್ರಮಣದಾರರಿಗೆ ನೋಟಿಸ್‌ ಕೊಟ್ಟು ತೆರವುಗೊಳಿಸಬೇಕು. ವಿದ್ಯುತ್‌ ಕಂಬ ಇರಬಾರದು. ಮಂಗಳವಾರದಿಂದಲೇ ಸರ್ವೇ ಪ್ರಾರಂಭಿಸಬೇಕು. ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕರು

ಹೊಸ ಡಿಸಿ ಸಿಕ್ಕಾಪಟ್ಟೆ ಸ್ಟ್ರಿಕ್ಟು  : ಹೊಸ ಡಿಸಿ ಸುನೀಲಕುಮಾರ ಅಭಿವೃದ್ಧಿ ವಿಷಯದಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕುr. ನನ್ನದೂ ಸೇರಿ ಯಾರ ಮಾತನ್ನೂ ಕೇಳೊಲ್ಲ. ಅತಿಕ್ರಮಣ ನಿರ್ದಾಕ್ಷಿಣ್ಯವಾಗಿ ಒಡೆದು ಹಾಕ್ತಾರೆ. ಅಭಿವೃದ್ಧಿ ವಿಷಯದಲ್ಲಿ ಅಡ್ಡ ಬರಬೇಡಿ ಎಂದು ಮೊನ್ನೆಯೇ ನನಗೆ ಹೇಳಿದ್ದಾರೆ. ಅತಿಕ್ರಮಣ ವಿಷಯದಲ್ಲಿ ನಾನು ಅಡ್ಡಬರೊಲ್ಲ. ನಿಯಮ ಪಾಲಿಸಿದವರಿಗೆ ಅಧಿಕಾರಿಗಳು ಸಹಕರಿಸಬೇಕು. ನಿಯಮಪಾಲಿಸದವರಿಗೆ ನಿಯಮಗಳ ಬಗ್ಗೆ ತಿಳಿ ಹೇಳಬೇಕು. ಪಟ್ಟಣದಲ್ಲಿರುವ ಎಲ್ಲಲೇಔಟ್‌ಗಳ ಮಾಹಿತಿ ಕೊಡುವಂತೆ ಟೌನ್‌ಪ್ಲಾನಿಂಗ್‌ನವರಿಗೆ ಸೂಚಿಸಿದ್ದೇನೆ ಎಂದು ಶಾಸಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next