Advertisement

ಗಾವಳಿ: ಕ್ರಷರ್‌ ಕಾರ್ಮಿಕ ನೇಣುಬಿಗಿದು ಆತ್ಮಹತ್ಯೆ

07:15 PM Jul 31, 2023 | Team Udayavani |

ಕೋಟ: ಕ್ರಷರ್‌ ಕಾರ್ಮಿಕನೋರ್ವ ಕ್ರಷರ್‌ನಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜು.30ರಂದು ಗಾವಳಿ ನಿಡ್ಲಾಡಿಯಲ್ಲಿ ಸಂಭವಿಸಿದೆ.

Advertisement

ಬಿಹಾರ್‌ ಮೂಲದ ಕಾರ್ಮಿಕ ಬಿಟ್ಟು ಕುಮಾರ್‌ (20 ) ಆತ್ಮಹತ್ಯೆಗೆ ಶರಣಾದವ.

ಈತ ಕ್ರಷರ್‌ನಲ್ಲಿ ಕೆಲಸ ಮಾಡಿಕೊಂಡಿದ್ದು ಪಕ್ಕದ ಶೆಡ್‌ನ‌ಲ್ಲಿ ವಾಸಮಾಡಿಕೊಂಡಿದ್ದ. ರಾತ್ರಿ ಫೋನ್‌ನಲ್ಲಿ ಮಾತನಾಡುತ್ತಾ ಹೊರಗಡೆ ಹೋದವನು ವಾಪಾಸು ಬಾರದಿದ್ದಾಗ ಜತೆಯಲ್ಲಿದ್ದಾತ ಹುಡುಕಾಟ ನಡೆಸಿದಾಗ ಕ್ರಷರ್‌ ಒಳಗಡೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.

ಈತ ವಿಪರೀತ ಕುಡಿತದ ಚಟ ಹೊಂದಿದ್ದು, ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಈ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next