Advertisement

ಗೌರಿ ಲಂಕೇಶ್‌ ಹತ್ಯೆ:ಶಾಸಕ ಸುರೇಶ್‌ ಕುಮಾರ್‌ ಟ್ವೀಟ್‌ ವೈರಲ್‌ 

03:57 PM Sep 06, 2017 | |

ಬೆಂಗಳೂರು : ಪತ್ರಕರ್ತೆ,ಪ್ರಗತಿಪರ ಚಿಂತಕಿ ಗೌರಿ ಲಂಕೇಶ್‌ ಅವರ ಹತ್ಯೆಯ ಬಳಿಕ ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶ್‌ ಕುಮಾರ್‌ ಅವರು ಮಾಡಿರುವ ಟ್ವೀಟ್‌ ಇದೀಗ ವೈರಲ್‌ ಆಗಿದೆ. 

Advertisement

ಟ್ವೀಟ್‌ನಲ್ಲಿ ”ಆಧಾರವಿಲ್ಲದೆ ಯಾವುದನ್ನೂ ನಂಬದ “ಇವರು” ಯಾವುದೇ ಆಧಾರವಿಲ್ಲದಿದ್ದರೂ ತಮಗಾಗದವರನ್ನು “ಅಪರಾಧಿ” ಎಂದು  ತೀರ್ಪು ಕೊಟ್ಟೇ ಬಿಡುತ್ತಾರೆ.  ಏಕೆಂದರೆ “ಇವರು” ವಿಚಾರವಾದಿಗಳು” ಎಂದು ಬರೆದಿದ್ದಾರೆ. 

ಗೌರಿ ಹತ್ಯೆಯ ಬಳಿಕ ಸಾಮಾಜಿಕ ತಾಣಗಳಲ್ಲಿ ಹಲವರು ಸಂಭ್ರಮಿಸಿ ಟ್ವೀಟ್‌ ಮಾಡಿದ್ದರು. ಹಿಂದೂ ಪರ ಸಂಘಟನೆಗಳ ಬದ್ಧ ವಿರೋಧಿಯಾಗಿದ್ದ ಗೌರಿ ಅವರ ಹತ್ಯೆಯನ್ನು ಹಲವು ಹಿಂದಿನ ಹೇಳಿಕೆಗಳನ್ನು ಉಲ್ಲೇಖ ಮಾಡಿ ಸ್ವಾಗತಿಸದ ಬೆಳವಣಿಗೆಳೂ ನಡೆದಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next