Advertisement

‘ಉಜ್ವಲ ಯೋಜನೆ ಸದುಪಯೋಗಿಸಿ’

12:32 PM Sep 22, 2018 | Team Udayavani |

ಬಂಟ್ವಾಳ: ಉಜ್ವಲ ಯೋಜನೆಯಡಿ ಪ. ಜಾತಿ, ಪಂಗಡದ 33 ಮಂದಿ ಫಲಾನುಭವಿಗಳಿಗೆ ಗ್ಯಾಸ್‌ ಸ್ಟೌ, ಅನಿಲ ಜಾಡಿ ಮತ್ತು ಕುಕ್ಕರನ್ನು ಸೆ. 21ರಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಬಂಟ್ವಾಳ ರೋಟರಿ ಕ್ಲಬ್‌ನಲ್ಲಿ ವಿತರಿಸಿದರು.

Advertisement

ಕೇಂದ್ರ ಸರಕಾರವು ಮಹಿಳೆಯರ ಹಿತದೃಷ್ಟಿಯಿಂದ ಯೋಜನೆಯನ್ನು ಜಾರಿ ಮಾಡಿದ್ದು, ಅದರ ಸದುಪಯೋಗ ಮಾಡುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸದ್ರಿ ಫಲಾನುಭವಿಗಳಿಗೆ ರೋಟರಿ ಕ್ಲಬ್‌ನಿಂದ ಕುಕ್ಕರ್‌ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್‌ ಅಧ್ಯಕ್ಷ ಮಂಜುನಾಥ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಶಿವಾನಿ ಬಾಳಿಗ, ಮಹಿಳಾ ವಿಭಾಗ ಅಧ್ಯಕ್ಷೆ ವಿದ್ಯಾ ಎ. ರೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next