Advertisement

ಕಾಪು ತಾಲೂಕಿನ ರಸ್ತೆಗಳಲ್ಲಿ ತ್ಯಾಜ್ಯದ್ದೇ ದೊಡ್ಡ ಸಮಸ್ಯೆ

02:25 AM Jun 18, 2018 | Team Udayavani |

ಕಾಪು: ಕಾಪು ತಾಲೂಕಿನಾದ್ಯಂತ ಇರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಸುತ್ತಮುತ್ತ ತ್ಯಾಜ್ಯದ್ದೇ ದೊಡ್ಡ ಸಮಸ್ಯೆಯಾಗಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಖಾಲಿ ಜಾಗಗಳು, ಸಾರ್ವಜನಿಕ ಸ್ಥಳಗಳು ಮತ್ತು ಚರಂಡಿ ಪಕ್ಕದಲ್ಲಿ ತ್ಯಾಜ್ಯ ರಾಶಿ ದಂಡಿಯಾಗಿದೆ. ತ್ಯಾಜ್ಯವು ಮಳೆ ನೀರಿನಿಂದಾಗಿ ಕೊಳೆತು ನಾರುತ್ತಿದ್ದು, ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ.

Advertisement

ಎಲ್ಲೆಲ್ಲಿ ತ್ಯಾಜ್ಯ ರಾಶಿ?
ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು, ಉಚ್ಚಿಲ ಮಹಾಲಕ್ಷ್ಮೀ ಸಭಾಭವನದ ಎದುರು, ಉಚ್ಚಿಲ ಮಾರುಕಟ್ಟೆ ಪರಿಸರ, ಮೂಳೂರು ಮಸೀದಿ ಮುಂಭಾಗ, ಪಾಂಗಾಳ, ಕಟಪಾಡಿ, ಉದ್ಯಾವರದಲ್ಲಿ ಕಸ – ತ್ಯಾಜ್ಯ ರಾಶಿಯಾಗುತ್ತಿದೆ. ಅದರೊಂದಿಗೆ ಕಾಪು – ಶಿರ್ವ ರಸ್ತೆಯಲ್ಲಿ ಮಲ್ಲಾರು, ಮಜೂರು, ಚಂದ್ರನಗರದಲ್ಲಿ ಹಾಗೂ ಕಟಪಾಡಿ – ಶಿರ್ವ ರಸ್ತೆಯಲ್ಲಿ ಸರಕಾರಿಗುಡ್ಡೆ, ಚೊಕ್ಕಾಡಿ, ಶಂಕರಪುರ, ಬಂಟಕಲ್ಲು ಸಹಿತ ಹಲವೆಡೆ ತ್ಯಾಜ್ಯದ ರಾಶಿ ಎದ್ದು ಕಾಣುತ್ತಿದೆ.

ಎಚ್ಚರಿಕೆ ಬೋರ್ಡ್‌ ಇರುವಲ್ಲೇ ತ್ಯಾಜ್ಯ 
ಉಚ್ಚಿಲ, ಕಟಪಾಡಿ, ಉದ್ಯಾವರ, ಮಜೂರು ಮೊದಲಾದ ಪ್ರದೇಶಗಳಲ್ಲಿ ಇಲ್ಲಿ ತ್ಯಾಜ್ಯ ಎಸೆಯಬಾರದು ಎಂದು ನಾಮಫಲಕ ಅಳವಡಿಸಲಾಗಿದೆ. ಆದರೆ ಈ ಬೋರ್ಡ್‌ ಅಡಿಯಲ್ಲೇ ತ್ಯಾಜ್ಯದ ರಾಶಿ ಇದೆ. ಕೆಲವೆಡೆಗಳಲ್ಲಿ ಜನರು ಹಗಲಿನಲ್ಲೇ ವಾಹನದಲ್ಲಿ ನಿಂತು ರಸ್ತೆಗೆ ಕಸ ಎಸೆದು ಹೋದರೆ, ಮತ್ತೆ ಕೆಲವು ಕಡೆಗಳಲ್ಲಿ ರಾತ್ರಿ ವೇಳೆ ಕದ್ದುಮುಚ್ಚಿ ಬಂದು ರಸ್ತೆ ಬದಿಯಲ್ಲಿ ಕಸ ತಂದು ಎಸೆದು ಹೋಗುತ್ತಿದ್ದಾರೆ. ಒಂದೆರಡು ದಿನ ಕಸ ಬಿದ್ದ ಪ್ರದೇಶ ಶುಚಿಯಾಗದೇ ಇದ್ದಲ್ಲಿ ಅಲ್ಲಿ ಬಳಿಕ ಕಸದ ಗುಡ್ಡೆಯೇ ನಿರ್ಮಾಣವಾಗುತ್ತದೆ.

ನಾಗರಿಕರು ಕೈಜೋಡಿಸಿ
ಕಸ – ತ್ಯಾಜ್ಯ ವಿಲೇವಾರಿ ಸ್ಥಳೀಯಾಡಳಿತ ಸಂಸ್ಥೆಗಳ ಹೊಣೆಯಾದರೂ ಈ ಬಗ್ಗೆ ಜನರು ಕೂಡಾ ಜಾಗೃತರಾಗುವುದು ಅತ್ಯಗತ್ಯವಾಗಿದೆ. ನಾಗರಿಕರು ಕೈ ಜೋಡಿಸದೇ ಇದ್ದರೆ ಈ ಸಮಸ್ಯೆ ಪರಿಹಾರ ಅಸಾಧ್ಯ. 
– ರಾಯಪ್ಪ, ಮುಖ್ಯಾಧಿಕಾರಿ, ಕಾಪು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next