Advertisement

ಕಸ ವಿಲೇವಾರಿ ಡಬ್ಬಿವಿತರಣೆ

11:02 AM Jun 05, 2020 | Team Udayavani |

ಲೋಕಾಪುರ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಬಸವೇಶ್ವರ ಸೌಹಾರ್ದ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ಚುಳಕಿ ಹೇಳಿದರು.

Advertisement

ಲೋಕೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನೀಡಿದ ಕಸ ವಿಲೇವಾರಿ ಡಬ್ಬಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಸಂಘವು ಅತ್ಯುತ್ತಮವಾಗಿ ಬಡವರು, ಕೃಷಿಕರು ಸೇರಿದಂತೆ ಎಲ್ಲ ವರ್ಗದವರ ಹಿತ ಕಾಪಾಡಲು ಶ್ರಮಿಸುತ್ತಿದೆ. ಸಾಮಾಜಿಕ, ಆರ್ಥಿಕವಾಗಿ ಅನೇಕ ಜನಪರ ಯೋಜನೆ ಕೈಗೊಂಡಿದೆ ಎಂದರು.

ಈ ವೇಳೆ ಗ್ರಾಪಂ ಸದಸ್ಯ ರಾಮಣ್ಣ ಕಿಲಾರಿ, ಶಿವಾನಂದ ಬೋಳಿಶೆಟ್ಟಿ, ದೇವಸ್ಥಾನ ಅರ್ಚಕರಾದ ಚನ್ನಯ್ಯ ಗಣಾಚಾರಿ, ಪಟ್ಟಯ್ಯ ಗಣಾಚಾರಿ, ಒಕ್ಕೂಟದ ಪದಾಧಿಕಾರಿಗಳಾದ ಜ್ಯೋತಿ ಸಂಶಿ, ಶಾಂತಾ ಬಿದ್ನಾಳ, ಮಹಾದೇವಿ ರೇವಣಶಿದ್ಧಿ, ಸರೋಜಾ ಬಟಕುರ್ಕಿ, ಲಕ್ಷ್ಮೀ ಬಾಯಿ ಹೂಗಾರ, ಸೇವಾ ಪ್ರತಿನಿಧಿ ಸಾವಿತ್ರಿ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next