Advertisement

ಆಸ್ಪತ್ರೆಯಿಂದಲೇ ಐಪಿಎಲ್‌ ಸಭೆಯಲ್ಲಿ ಪಾಲ್ಗೊಂಡ ಗಂಗೂಲಿ

12:32 AM Jan 09, 2021 | Team Udayavani |

ಕೋಲ್ಕತಾ: ಯಶಸ್ವಿ ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಗುರುವಾರ ಕೋಲ್ಕತಾದ ವುಡ್‌ಲ್ಯಾಂಡ್ಸ್‌ ಹಾಸ್ಪಿಟಲ್‌ನಿಂದ ಬಿಡುಗಡೆ ಗೊಂಡು ಮನೆಗೆ ಆಗಮಿಸಿದ್ದಾರೆ. ಆದರೆ ಅವರು ಆಸ್ಪತ್ರೆಯಲ್ಲಿದ್ದಾಗಲೇ, ಜ. 5ರಂದು ಐಪಿಎಲ್‌ ಆಡಳಿತ ಮಂಡಳಿ ಸಭೆಯೊಂದರಲ್ಲಿ ಪಾಲ್ಗೊಂಡಿದ್ದು ತಡವಾಗಿ ತಿಳಿದು ಬಂದಿದೆ.

Advertisement

ಹೃದಯಾಘಾತಕ್ಕೊಳಗಾಗಿ ತೀವ್ರ ಸುಸ್ತಾಗಿದ್ದರೂ  ಐಪಿಎಲ್‌ಗೆ ಸಂಬಂಧಿಸಿದಂತೆ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಗಂಗೂಲಿ ಮುಂದಾದರು. ಆಸ್ಪತ್ರೆಯ ಹಾಸಿಗೆಯಲ್ಲಿದ್ದುದರಿಂದ ಅವರೀಗೆ ವೀಡಿಯೋ ಕಾನ್ಫರೆನ್ಸ್‌ ಸಾಧ್ಯವಿರಲಿಲ್ಲ. ಹೀಗಾಗಿ ಆಡಿಯೋ ಕಾಲ್‌ ಸಂಪರ್ಕ ನೀಡಲಾಯಿತು. ಈ ಮೂಲಕ ಸಲಹೆ ಸೂಚನೆ ನೀಡಿದರು. ಐಪಿಎಲ್‌ ರೀಟೇನ್‌ ದಿನಾಂಕವನ್ನು ನಿಗದಿಗೊಳಿಸಿದ್ದು ಇದರಲ್ಲೊಂದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next