Advertisement

ಬೆಂಗಳೂರು : ಕುಖ್ಯಾತ ದರೋಡೆಕೋರ ಮುಂಬಯಿ ಪೊಲೀಸರ ಬಲೆಗೆ

03:36 PM Mar 07, 2022 | Team Udayavani |

ಮುಂಬಯಿ : ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಕನಿಷ್ಠ 37 ಪ್ರಕರಣಗಳಲ್ಲಿ ಬೇಕಾಗಿದ್ದ ದರೋಡೆಕೋರ ಇಲಿಯಾಸ್ ಬಚ್ಕಾನಾನನ್ನು ಮುಂಬಯಿ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

Advertisement

ಮುಂಬಯಿ ಪೊಲೀಸರ ಅಪರಾಧ ಗುಪ್ತಚರ ಘಟಕ (ಸಿಐಯು) ಶನಿವಾರ ಸಂಜೆ ಕರ್ನಾಟಕ ಪೊಲೀಸರ ಸಹಾಯದಿಂದ ಅಂತರರಾಜ್ಯ ಪಾತಕಿಯನ್ನು ಬಂಧಿಸಿದೆ ಎಂದು ಅವರು ಹೇಳಿದರು.

ಕೊಲೆ, ಕೊಲೆ ಯತ್ನ, ಕಳ್ಳತನ, ದರೋಡೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಶಸ್ತ್ರಾಸ್ತ್ರ ಕಾಯಿದೆ ಹಾಗೂ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ಕಟ್ಟುನಿಟ್ಟಿನ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಸೇರಿದಂತೆ ಕನಿಷ್ಠ 37 ಪ್ರಕರಣಗಳಲ್ಲಿ ಈತ ಇಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಬಂಧನದ ನಂತರ, ದರೋಡೆಕೋರನನ್ನು ಮುಂಬೈಗೆ ಕರೆತರಲಾಯಿತು ಮತ್ತು ಕಳೆದ ವರ್ಷ ಏಪ್ರಿಲ್ 30 ರಂದು ದಾಖಲಾದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಬೈಕುಲ್ಲಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜು ಲುಲಾಡಿಯಾ (47) ಎಂಬ ವ್ಯಕ್ತಿಯ ಮೇಲೆ ಮೂವರು ವ್ಯಕ್ತಿಗಳು ಸ್ಟೀಲ್ ರಾಡ್ ಮತ್ತು ಪೈಪ್‌ಗಳಿಂದ ಹಲ್ಲೆ ನಡೆಸಿದ್ದರು ಮತ್ತು ಬಚ್ಕಾನಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪೊಲೀಸರು ವಾಜಿದ್ ಶೇಖ್, ಕರೀಂ ಖಾನ್, ಕರೀಂ ಖಾನ್, ಮೊಹಮ್ಮದ್ ಸೈಫ್ ಶೇಖ್ ಮತ್ತು ಹಿಫಾಜುರ್ ಅನ್ಸಾರಿ ಅವರನ್ನು ಬಂಧಿಸಿದ್ದರು, ಆದರೆ ಈ ಪ್ರಕರಣದಲ್ಲಿ ಬಚ್ಕಾನಾ ಕೂಡ ಬೇಕಾಗಿದ್ದ.

ಬೆಂಗಳೂರು ಸಮೀಪದ ಹೊಸೂರಿನಲ್ಲಿ ಬಚ್ಕಾನ ಅಡಗಿ ಕುಳಿತಿರುವ ಬಗ್ಗೆ ಪೊಲೀಸರಿಗೆ ನಿರ್ದಿಷ್ಟ ಮಾಹಿತಿ ಲಭಿಸಿದ್ದು, ಸಿಐಯು ತಂಡ ಅಲ್ಲಿಗೆ ತೆರಳಿ ಆತನನ್ನು ಹೊಟೇಲ್‌ನಿಂದ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next