Advertisement

ಗಣೇಶೋತ್ಸವ ಸಂಭ್ರಮ ಕುಗ್ಗಿಸಿದ ಬಿಗಿ ಷರತ್ತುಗಳು

04:08 PM Sep 09, 2021 | Team Udayavani |

ಚಾಮರಾಜನಗರ: ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ದೇವಸ್ಥಾನ ಹಾಗೂ ತಮ್ಮ-ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕಡಿಮೆ ಜನರ ಉಪಸ್ಥಿತಿಯಲ್ಲಿ ಆಚರಿಸಲು ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಈ ಬಾರಿ ಗಣೇಶ ಹಬ್ಬದ ಸಂಭ್ರಮ ಕಡಿಮೆಯಾಗಿದೆ.

Advertisement

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ2 ಅಡಿ ಮೀರದಂತೆ ಪ್ರತಿಷ್ಠಾಪಿಸುವ
ನಿಯಮ ವಿಧಿಸಲಾಗಿದೆ.

ನಗರ ಪ್ರದೇಶಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶೋತ್ಸವನ್ನುಮಾತ್ರಆಚರಿಸಲು ಪ್ರೋತ್ಸಾಹಿಸಲಾಗುತ್ತದೆ. ಗಣೇಶೋತ್ಸವ ವನ್ನು ಗರಿಷ್ಠ 5 ದಿನಗಳಿಗಿಂತ (ಸೆ. 10ರಿಂದ 14ರವರೆಗೆ ವರೆಗೆ ಮಾತ್ರ) ಹೆಚ್ಚಿನ ದಿನ ಆಚರಿಸುವಂತಿಲ್ಲ. ಇಂತಹ ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದಆವರಣವನ್ನು ನಿರ್ಮಿಸಬೇಕು. ಒಮ್ಮೆಲೆ 20ಕ್ಕಿಂತ ಹೆಚ್ಚಿನ ಜನ ಸೇರದಂತೆ ಅನುವು ಮಾಡಬೇಕು. ಗಣೇಶ ಆಚರಣೆಯ ಆಯೋಜಿತ ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪಿಸಬೇಕು.

ಇದನ್ನೂ ಓದಿ:ತೆರೆ ಮೇಲೆ ‘ದಾದಾ’ ದಿನಗಳು : ಸಿದ್ಧವಾಗಲಿದೆ ಗಂಗೂಲಿ ಬಯೋಪಿಕ್

ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮುಖ್ಯವಾಗಿ ಡಿ.ಜೆ.ಯ ಮೂಲಕ ಹಾಗೂ ಇನ್ನಿತರೆ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ.

Advertisement

ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭದಲ್ಲಿ ಯಾವುದೇ ಮೆರವಣಿಗೆ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವುದು.
ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು ಮತ್ತು ಸರ್ಕಾರಿ, ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತಿ ಕನಿಷ್ಠ ಜನಸಂಖ್ಯೆಯೊಂದಿಗೆ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್‌ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕ್‌ಗಳಲ್ಲಿ ವಿಸರ್ಜಿಸಬೇಕು.

ಆಸಕ್ತಿಯನ್ನೇ ತೊರಡ ಮಂಡಳಿಗಳು: ಕೋವಿಡ್‌ ಷರತ್ತುಗಳು ಗಣಪತಿ ಮಂಡಳಿಗಳ ಉತ್ಸಾಹವನ್ನು ತಗ್ಗಿಸಿದೆ. ಮೆರವಣಿಗೆ ಇಲ್ಲದೇ ಗಣೇಶೋತ್ಸವಕ್ಕೆ ಸಂಭ್ರಮ ಇಲ್ಲ. ಹೀಗಾಗಿ ನಿಯಮಾನುಸಾರ ಸರಳ ರೀತಿಯಲ್ಲಿ ಆಚರಿಸಲು ಕೆಲ ಮಂಡಳಿಗಳು ಮುಂದಾಗಿವೆ. ಇನ್ನು ಕೆಲ ಬಡಾವಣೆಗಳ ಸಂಘ, ಸಂಸ್ಥೆಗಳು ಈ ಬಾರಿ ಗಣೇಶೋತ್ಸವ ನಡೆಸಲು ಆಸಕ್ತಿಯನ್ನೇ ತೋರಿಸುತ್ತಿಲ್ಲ

ಗಣೇಶ ಮೂರ್ತಿಗಳಿಗೆ ಬೇಡಿಕೆ ಇಲ್ಲ
ಕೊನೆಗಳಿಗೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದರಿಂದ ಗಣೇಶ ಮೂರ್ತಿ ಮಾರಾಟಗಾರರು ಎರಡು ದಿನದಿಂದ ಮಳಿಗೆ ತೆರೆದಿದ್ದಾರೆ. ಕಳೆದ ವರ್ಷವೂ ಗಣೇಶ ಮೂರ್ತಿ ಮಾರಾಟ ಬಹಳಕಡಿಮೆಯಾಗಿದ್ದರಿಂದ ಕಳೆದ ಬಾರಿ ಮಾರಾಟವಾಗದೇ ಉಳಿದಿದ್ದ ಗಣೇಶನನ್ನೇ ಈಗ ಮಾರುತ್ತಿದ್ದೇವೆ ಎಂದು ಗಣಪತಿ ಮಾರಾಟಗಾರರೊಬ್ಬರು ತಿಳಿಸಿದರು. ಗಣೇಶೋತ್ಸವ ಇಲ್ಲ ಎಂದಿದ್ದರು. ಈಗ ಎರಡು ದಿನದ ಹಿಂದೆ ಪ್ರಕಟಿಸಿದರು. 15 ದಿನಗಳ ಹಿಂದೆಯೇ ಗಣೇಶ ಮೂರ್ತಿ ಮಾರಾಟ ಶುರುವಾಗುತ್ತಿತ್ತು. ಈಗ ಐದು ದಿನಗಳೂ ಅವಕಾಶವಿಲ್ಲ. ನಿನ್ನೆಯಿಂದ 5 ಗಣೇಶ ಮಾರಾಟವಾಗಿವೆ. ದೊಡ್ಡ ಮೂರ್ತಿಗಳನ್ನು ಕೇಳುವವವರೇ ಇಲ್ಲ. ಈ ಬಾರಿಯೂ ನಮಗೆ ತುಂಬ ನಷ್ಟವಾಗುತ್ತದೆ ಎಂದು ಮಾರಾಟಗಾರ ಮಹೇಶ್‌ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next