Advertisement

ನಿರ್ವಹಣೆ ಖರ್ಗೆಯದ್ದು, ನೇತೃತ್ವ ಗಾಂಧಿಗಳದ್ದು!

09:16 PM Dec 29, 2022 | Team Udayavani |

ನವದೆಹಲಿ: “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ಪಕ್ಷದ ನಿರ್ವಹಣೆಯನ್ನಷ್ಟೇ ನೋಡಿಕೊಳ್ಳುತ್ತಾರೆ. ಆದರೆ, ಕಾಂಗ್ರೆಸನ್ನು ಯಾವತ್ತೂ ಮುನ್ನಡೆಸುವವರು ಗಾಂಧಿ ಕುಟುಂಬದವರೇ ಆಗಿರುತ್ತಾರೆ’ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

Advertisement

ಅವರ ಹೇಳಿಕೆಯನ್ನೇ ಇಟ್ಟುಕೊಂಡು ಕಾಂಗ್ರೆಸ್‌ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ, “ಈಗ ಸತ್ಯ ಹೊರಬಿತ್ತು. ಕಾಂಗ್ರೆಸ್‌ ವಂಶಾಡಳಿತ ಮತ್ತು ಭಟ್ಟಂಗಿತನದ ಮೇಲೆ ನಂಬಿಕೆಯಿಟ್ಟಿದೆ. ಸಲ್ಮಾನ್‌ ಖುರ್ಷಿದ್‌ ಅವರೇ ಹೇಳಿದಂತೆ, ಕಾಂಗ್ರೆಸ್‌ ಅಧ್ಯಕ್ಷರು ಯಾರೇ ಆದರೂ, ನಾಯಕತ್ವ ಇರುವುದು ಸೋನಿಯಾ ಮತ್ತು ರಾಹುಲ್‌ ಕೈಯ್ಯಲ್ಲಿ. ಹಾಗಿದ್ದರೆ, ಖರ್ಗೆ ಅವರನ್ನು ನಾವು ರಿಮೋಟ್‌ ಕಂಟ್ರೋಲ್‌ ಅಧ್ಯಕ್ಷ ಎಂದು ಕರೆಯುವುದೇ ಅಥವಾ ರಬ್ಬರ್‌ ಸ್ಟಾಂಪ್‌ ಅಧ್ಯಕ್ಷ ಎಂದು ಕರೆಯುವುದೇ’ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next