Advertisement

ಕರ್ನಾಟಕ ಮುಖ್ಯಮಂತ್ರಿಯಿಂದ “ಗಾನ ಗಂಗೆ’ಲೋಕಾರ್ಪಣೆ

06:08 PM Sep 18, 2020 | mahesh |

ಕಾಸರಗೋಡು: ಕಾಸರಗೋಡಿನ ಬಹುಮುಖಿ ಕಲಾವಿದ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಅವರ ನಿಸ್ಪೃಹ ಬದುಕನ್ನು ಆದರಿಸಿ ಪತ್ರಕರ್ತ, ಲೇಖಕ ರವಿ ನಾಯಿಕಾಪು ಅವರು ಬರೆದು ಸುಬ್ಬಯಕಟ್ಟೆ ಕೈರಳಿ ಪ್ರಕಾಶನ ಪ್ರಕಟಿಸಿದ ಸಾಹಿತಿಕ ಕೃತಿ “ಗಾನ ಗಂಗೆ’ ಲೋಕಾರ್ಪಣೆಗೊಂಡಿತು.

Advertisement

ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಲೇಖಕ ಹಾಗೂ ಪ್ರಕಾಶಕರ ಪ್ರಯತ್ನವನ್ನು ಸ್ಲಾಘಿಸಿದರು. ಸದ್ರಿ ಕೃತಿಯು ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ನಿಧಿಯಾಗಲಿ ಎಂದು ಹಾರೈಸಿದರು.

ಪ್ರಕಾಶಕ ಎ.ಆರ್‌. ಸುಬ್ಬಯಕಟ್ಟೆ. ಲೇಖಕ ರವಿ ನಾಯಿಕಾಪು, ಸಾಹಿತ್ಯ ಸಂಘಟಕ ಪಮ್ಮಿ ಕೊಡಿಯಾಲಬೈಲು, ಹರಿದಾಸ ಜಯಾನಂದ ಕುಮಾರ, ಝಡ್‌.ಎ. ಕಯ್ನಾರ್‌, ಅಕ್ಷಯ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next