Advertisement

Gadaga: ಶಿರಹಟ್ಟಿ ಬರಪೀಡಿತ ತಾಲೂಕೆಂದು ಘೋಷಿಸಿ

06:06 PM Aug 31, 2023 | Team Udayavani |

ಶಿರಹಟ್ಟಿ: ಶಿರಹಟ್ಟಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹಿಸಿ ಪಟ್ಟಣದ ಹನುಮಂತ ದೇವರ ದೇವಸ್ಥಾನದಿಂದ ಪ್ರತಿಭಟನೆ ಕೈಗೊಂಡ ರೈತರು, ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ರವಿ ಹಳ್ಳಿ, ಶಿವು ಕಲ್ಯಾಣಿ, ಸಂತೋಷ ಕುರಿ, ಲಕ್ಷ್ಮಣ ಹಾದಿಮನಿ ಮಾತನಾಡಿ, ಶಿರಹಟ್ಟಿ ತಾಲೂಕಿನ ರೈತರು
2023ರಲ್ಲಿ ಸರಿಯಾಗಿ ಮಳೆಯಾಗದ ಕಾರಣ ಬಿತ್ತಿದ ಯಾವುದೇ ಬೆಳೆ ಬೆಳೆಯದೇ ಕಮರಿಹೋಗಿವೆ.

ಕೆಲ ರೈತರು ಹತಾಶರಾಗಿ ಬಿತ್ತಿದ ಬೆಳೆಯನ್ನು ಹರಗಿದ್ದಾರೆ. ಶಿರಹಟ್ಟಿ ತಾಲೂಕು ಮಳೆಯಾಶ್ರಿತ ಪ್ರದೇಶ ವಾಗಿರುವುದರಿಂದ ಸಕಾಲಕ್ಕೆ ಮಳೆಯಾಗದೇ ತೊಂದರೆ ಅನುಭವಿಸುವಂತಾಗಿದೆ. ಸರಕಾರ ಕೂಡಲೇ ರೈತರ ಕಷ್ಟಕ್ಕೆ ಸ್ಪಂದಿಸಿ ಬರಪೀಡಿತ ತಾಲೂಕು ಎಂದು ಘೋಷಿಸಬೇಕೆಂದು ಆಗ್ರಹಿಸಿದರು.

ಜುಲೈ ಅಂತ್ಯಕ್ಕೆ ರೈತರು ಬಿತ್ತನೆ ಮಾಡುವ ವಾಡಿಕೆ ಇದ್ದು, ಆಗಸ್ಟ್‌ ತಿಂಗಳು ಗತಿಸುತ್ತಾ ಬಂದರೂ ಮಳೆ ಬಾರದೇ ಇದ್ದುದರಿಂದ
ರೈತ ಸಮೂಹ ಕಂಗಾಲಾಗಿದೆ. ಈ ತಿಂಗಳಲ್ಲಿ ಕೇವಲ 9 ಮಿಮೀ. ಮಾತ್ರ ಮಳೆಯಾಗಿದೆ. ಆದ್ದರಿಂದ ಶಿರಹಟ್ಟಿ ತಾಲೂಕನ್ನು ಕೃಷಿ ಸಚಿವರು ತೀವ್ರ ಬರಪೀಡಿತ ತಾಲೂಕೆಂದು ಘೋಷಿಸಿ ಅಗತ್ಯ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತರ ಸಾಲ ಮನ್ನಾ ಮಾಡಬೇಕು.

ಬದುಕುವುದಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ರೈತರು ಸಾಲಸೂಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಸಂಕಷ್ಟಕ್ಕೆ ಈಡಾಗಿದ್ದಾರೆ. ದನಕರುಗಳು, ಜಾನುವಾರುಗಳಿಗೆ ಮೇವು, ನೀರಿನ ತೊಂದರೆ ಅನುಭವಿಸುವಂತಾಗಿದೆ. ಸದಾಕಾಲ ರೈತರು ತೊಂದರೆ ಅನುಭವಿಸುತ್ತಿರುವುದರಿಂದ ಸರಕಾರ ರೈತರ ಬದುಕಿಗಾಗಿ ದಿಟ್ಟ ನಿಲುವು ಹೊಂದುವುದು ಅಗತ್ಯವಿದೆ ಎಂದರು.

Advertisement

ಈ ಸಂದರ್ಭದಲ್ಲಿ ಚಂದ್ರು ಹಮ್ಮಿಗಿ, ಚಂದ್ರು ತಳವಾರ, ನೀಲಪ್ಪ ತುಳಿ, ಯಲ್ಲಪ್ಪ ಕುರಿ, ಎನ್‌. ವೈ. ಹುಬ್ಬಳ್ಳಿ, ಮಾದೇವಪ್ಪ ತುಳಿ, ಚನ್ನವೀರಪ್ಪ ಕಲ್ಯಾಣಿ, ಎಂ.ಡಿ.ವರವಿ, ಆರ್‌.ಎಫ್‌.ವರವಿ, ಗಣೇಶ ಬಿಡವೆ, ಸಿ.ಬಿ.ತುಳಿ, ಸಹದೇವಪ್ಪ ಹಳ್ಳಿಕೇರಿ, ಸಿ.ಎಫ್‌.ಹಾಲಪ್ಪನವರ, ವಿನಾಯಕ ಕುರಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next