Advertisement

ಅಂತ್ಯಸಂಸ್ಕಾರ ಸಹಾಯ ನಿಧಿ ಸ್ಥಗಿತ ಸಿಎಂ ಜತೆ ಚರ್ಚಿಸಿ ಕ್ರಮ: ಕೋಟ

11:58 PM Mar 22, 2022 | Team Udayavani |

ಬೆಂಗಳೂರು: ಅಂತ್ಯ ಸಂಸ್ಕಾರ ಸಹಾಯಧನ ಅರ್ಜಿಗಳ ಪೈಕಿ ರಾಜ್ಯದಿಂದ 17.92 ಕೋ.ರೂ.ಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಸಹಾಯಧನ ಪಾವತಿ ಮಾಡುತ್ತಿದ್ದೇವೆ. ಸಪ್ಟೆಂಬರ್‌ ತಿಂಗಳಿನಿಂದ ಅರ್ಜಿ ಸ್ವೀಕಾರ ಸ್ಥಗಿತಗೊಂಡಿರುವ ಪ್ರಸ್ತಾವಕ್ಕೆ ಸಂಬಂಧಿಸಿ ಕೊರೊನಾ ಕಾರಣಗಳಿಗಾಗಿ ಒಂದಷ್ಟು ದಿನ ಸ್ಥಗಿತ ಆಗಿರಬಹುದು. ಈ ವಿಚಾರವನ್ನು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಸಹಾಯಧನ ಮುಂದುವರಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

Advertisement

ಕಾಂಗ್ರೆಸ್‌ನ ಡಾ| ಮಂಜುನಾಥ ಭಂಡಾರಿ ಅವರು ಮಂಗಳವಾರ ಸದನದಲ್ಲಿ ಈ ಬಗ್ಗೆ ಪ್ರಸ್ತಾವಿಸಿದಾಗ ಸಚಿವರು ಉತ್ತರಿಸಿದರು.

2006ರಲ್ಲಿ ಅಂತ್ಯಸಂಸ್ಕಾರ ಸಹಾಯ ನಿಧಿ ಯೋಜನೆಯನ್ನು ಆರಂಭಿಸಲಾಗಿತ್ತು. ಇದರಡಿ ಬಡತನ ರೇಖೆಗಿಂತ ಕೆಳಗಿನವರು ಮೃತಪಟ್ಟರೆ, ಅಂತಹವರ ಅಂತ್ಯಕ್ರಿಯೆಗೆ ಸರಕಾರವು ಐದು ಸಾವಿರ ರೂ. ನೀಡುತ್ತದೆ. ಆದರೆ, ಈ ಹಣ ಮೃತಪಟ್ಟವರ ತಿಥಿ ಮುಗಿದರೂ ಕೈ ಸೇರುತ್ತಿಲ್ಲ. ಒಂದೆಡೆ ಈ ವಿಳಂಬ ಧೋರಣೆ ಅನುಸರಿಸುತ್ತಿದ್ದರೆ, ಮತ್ತೂಂದೆಡೆ ಯೋಜನೆಯಡಿ ಅರ್ಜಿ ಸ್ವೀಕರಿಸುವುದನ್ನೇ ನಿಲ್ಲಿಸಲಾಗಿದೆ.

ಇದನ್ನೂ ಓದಿ:ನಾವೂ ಹಿಂದೂಗಳೇ, ಭಗವದ್ಗೀತೆ ಬಗ್ಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ

ಇದರೊಂದಿಗೆ ಸದ್ದಿಲ್ಲದೆ ಯೋಜನೆ ಸ್ಥಗಿತಗೊಳಿಸುವ ಹುನ್ನಾರ ನಡೆದಿದೆ ಎಂದು ಮಂಜುನಾಥ ಭಂಡಾರಿ ಆರೋಪಿಸಿದರು. 2006ರಲ್ಲಿ ಆರಂಭಗೊಂಡ ಈ ಯೋಜನೆ ಅಡಿ ಮೊದಲು ಸಾವಿರ ರೂ. ನೀಡಲಾಗುತ್ತಿತ್ತು. 2015ರ ಎಪ್ರಿಲ್‌ 1ರಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿತ್ತು. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ನೀಡುವ ಸಹಾಯ ನಿಧಿ ಯೋಜನೆಯನ್ನು ಸರಕಾರ ಸದ್ದಿಲ್ಲದೆ ಸ್ಥಗಿತಗೊಳಿಸುತ್ತಿದ್ದು, ಇದು ಖಂಡನೀಯ ಎಂದರು.

Advertisement

“ಉದಯವಾಣಿ’ ವರದಿ ಉಲ್ಲೇಖ
“ಅಂತ್ಯಸಂಸ್ಕಾರ ಸಹಾಯಧನ ಸದ್ದಿಲ್ಲದೆ ಸ್ಥಗಿತ!’ ಎನ್ನುವ ಶೀರ್ಷಿಕೆ ಅಡಿ ” ಉದಯವಾಣಿ’ಯ ಕೊನೆಯ ಪುಟದಲ್ಲಿ ಮಾ. 22ರಂದು ಪ್ರಕಟವಾದ ವರದಿಯನ್ನು ಉಲ್ಲೇಖಿಸುವ ಮೂಲಕ ಸರಕಾರದ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next