Advertisement

ಪರಿಹಾರ ನಿಧಿಗೆ ಹಣ ಸಂಗ್ರಹ

04:58 AM May 17, 2020 | Team Udayavani |

ಬೀಳಗಿ: ಕೋವಿಡ್‌-19 ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ, ಪ್ರಧಾನಿ ಮೋದಿ ಕೈ ಬಲಪಡಿಸುವ ನಿಟ್ಟಿನಲ್ಲಿ ನಗರದ ಕಿಲ್ಲಾ ಗಲ್ಲಿಯ ವಾರ್ಡ್‌ನ ಜನರಿಂದ ಪಿಎಂ ಪರಿಹಾರ ನಿಧಿಗೆ 7495 ರೂ. ಹಣ ಸಂಗ್ರಹಿಸಲಾಗಿದೆ.

Advertisement

ಶನಿವಾರ ವಾರ್ಡ್‌ನ ಪ್ರತಿ ಮನೆ, ಮನೆಗೆ ತೆರಳಿ ಹಣ ಸಂಗ್ರಹಿಸಲಾಯಿತು. ಪಪಂ ಸದಸ್ಯ ವಿಠಲ ಬಾಗೇವಾಡಿ ಮಾತನಾಡಿ, ಕಿಲ್ಲಾ ಗಲ್ಲಿಯ ಜನರಿಂದ ಸಂಗ್ರಹಿಸಲಾದ ಹಣವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಪರಿಹಾರ ನಿಧಿ ಖಾತೆಗೆ ನೀಡಲಾಗುವುದು ಎಂದರು.

ಈರಣ್ಣ ತೋಟದ, ಗುರಪಾದ ಬಗಲಿ, ಮಲ್ಲು ಜಲಗೇರಿ, ವೆಂಕಪ್ಪ ಜಲಗೇರಿ, ರಮೇಶ ಉಕ್ಕಲಿ, ಸಾಗರ ಅಂಬೋರೆ, ರಾಜು ಪರಸಗೊಂಡ, ರಮೇಶ ಹಡಪದ, ರಾಜು ಬಿದರಿ, ರವಿ ಪೂಜಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next