Advertisement

ವೀಡಿಯೋ ಆಲ್ಬಂನಿಂದ ಚಿತ್ರರಂಗಕ್ಕೆ!

12:04 PM Jan 12, 2018 | Team Udayavani |

“ಇಲ್ಲಿ ಯಾರ್‌ ಯಾರನ್ನೂ ಹೀರೋ ಮಾಡಲ್ಲ ಅಣ್ತಮ್ಮ. ನಮಗೆ ನಾವೇ ಹೀರೋ ಆಗಬೇಕು’ ಯಶ್‌ ಅವರ ಈ ಡೈಲಾಗ್‌ ಅದೆಷ್ಟು ಮಂದಿಯನ್ನು ಪ್ರೇರೇಪಿಸಿದೆಯೋ ಗೊತ್ತಿಲ್ಲ. ಒಂದಷ್ಟು ಮಂದಿಯಂತೂ ತಾವೇ ಸಿನಿಮಾ ಮಾಡಿ, ಆ ಮೂಲಕ ಹೀರೋ ಆಗಿದ್ದಂತೂ ಸುಳ್ಳಲ್ಲ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಕುಶಾನ್‌ ಗೌಡ. ಯಾರು ಈ ಕುಶಾನ್‌ ಗೌಡ ಎಂದು ಕೇಳಿದರೆ ಸದ್ಯಕ್ಕೆ “ಎಣ್ಣೆ ಸಾಂಗ್‌ …’ ತೋರಿಸಬೇಕು. ಅದು ಬಿಟ್ಟು ಬೇರೇನಾದರೂ ಹೇಳಿ ಎಂದರೆ “ನಾಕುಮುಖ’ ಸಿನಿಮಾ ಬಗ್ಗೆ ಹೇಳಬೇಕು. 

Advertisement

“ನಾಕುಮುಖ’ ಎಂಬ ಸಿನಿಮಾವೊಂದು ಆರಂಭವಾಗಿದ್ದು, ಈ ಸಿನಿಮಾವನ್ನು ನಿರ್ದೇಶಿಸಿ, ನಾಯಕರಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿಕೊಡಲು ಸಿದ್ಧರಾಗಿದ್ದಾರೆ ಕುಶಾನ್‌ ಗೌಡ. ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕು, ಅದರಲ್ಲೇ ಮುಂದುವರಿಯಬೇಕೆಂಬ ಆಸೆ ಹೊಂದಿದ್ದ ಕುಶಾನ್‌ ಈಗಗಾಲೇ “ಎಣ್ಣೆ ಸಾಂಗ್‌’ ಎಂಬ ಆಲ್ಬಂವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ನಂತರ ಸಿನಿಮಾದಲ್ಲಿ ಅವಕಾಶ ಪಡೆಯಲು ಚಿತ್ರರಂಗದಲ್ಲಿ ಸೈಕಲ್‌ ಹೊಡೆದಿದ್ದಾರೆ. ಆದರೆ, ಯಾರೂ ಕೊಟ್ಟಿಲ್ಲ. ನೀನ್‌ ಸೂಪರ್‌ ಗುರು, ಒಳ್ಳೇ ಟ್ಯಾಲೆಂಟೆಡ್‌, ಮಾಡುವ ಬಿಡಮ್ಮಾ …’ ಎಂದು ಹೇಳಿ ಸುಮ್ಮನಾಗಿದ್ದಾರೆ. ಇದರಿಂದ ಬೇಸತ್ತ ಕುಶಾನ್‌, ಬೇರೆಯವರನ್ನು ನಂಬಿಕೊಂಡರೆ ಚಿತ್ರರಂಗದಲ್ಲಿ ಅವಕಾಶ ಸಿಗೋದಿಲ್ಲ ಎಂದು ಸ್ವತಃ ತಾವೇ ಕಥೆ ಬರೆದು, ನಿರ್ದೇಶನ ಮಾಡಿ ನಾಯಕರಾಗಿಯೂ ನಟಿಸಲು ರೆಡಿಯಾಗಿದ್ದಾರೆ. ಈಗಾಗಲೇ ಹಾಡುಗಳ ಧ್ವನಿಮುದ್ರಣವಾಗಿದ್ದು, ಚಿತ್ರೀಕರಣಕ್ಕೆ ಹೊರಡಲು ಅಣಿಯಾಗಿದೆ.  “ಇಲ್ಲಿ ಕಥೆಯೇ ಹೀರೋ. ಇದು ರೆಗ್ಯುಲರ್‌ ಪ್ಯಾಟರ್ನ್ ಸಿನಿಮಾವಲ್ಲ. ನಾನು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದೇನೆ ಅಷ್ಟೇ’ ಎನ್ನುತ್ತಾರೆ. ಚಿತ್ರದ ಒಂದು ಹಾಡನ್ನು ಕೂಡಾ ಕುಶಾನ್‌ ಅವರೇ ಬರೆದು ಹಾಡಿದ್ದಾರೆ.

ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next