Advertisement

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

12:24 AM Sep 20, 2024 | Team Udayavani |

ಹೊಸದಿಲ್ಲಿ: ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ. ಅವ ರನ್ನು ನಿಯಂತ್ರಿಸಿ ಎಂದು ದೂರಿ ಪ್ರಧಾನಿ ಮೋದಿ ಗೆ ಎಐಸಿಸಿ ಅಧ್ಯಕ್ಷ ಮಲ್ಲಿ­ಕಾರ್ಜು­ನ ಖರ್ಗೆ ಪತ್ರ ಬರೆ­ದಿದ್ದರು. ಅದಕ್ಕೆ ಉತ್ತರಿಸಿ ರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.­ನಡ್ಡಾ ಪ್ರಧಾನಿ ವಿರುದ್ಧ ಕಾಂಗ್ರೆಸ್‌ ನಾಯ ಕರು ಬೈದಿದ್ದ ಅಂಶ­ಗಳನ್ನೆಲ್ಲ ಉಲ್ಲೇಖೀಸಿ ಪ್ರತ್ಯುತ್ತರ ಪತ್ರ ಬರೆದಿದ್ದಾರೆ. ಪ್ರಧಾನಿಯನ್ನು ಸಾವಿನ ವ್ಯಾಪಾರಿ ಎಂದಿದ್ದು ಸೋನಿಯಾ ತಾನೇ? ಅದನ್ನು ಕಾಂಗ್ರೆಸ್‌ ವೈಭವೀಕರಿಸಿ ಮುಂದುವರಿಸಿದಾಗ ರಾಜಕೀಯ ಸೌಜನ್ಯ ಎಲ್ಲಿ ಹೋ ಗಿತ್ತು? ಪ್ರಧಾನಿಯನ್ನು ಚೇಳು, ಹೇಡಿ, ಜೇಬುಗಳ್ಳನಿಗೆ ಹೋಲಿಸಿದ್ದಾರೆ ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next