Advertisement

ಸ್ನೇಹ ಬೇರೆ, ರಾಜಕೀಯ ಬೇರೆ: ಶ್ರೀರಾಮುಲು

05:45 PM Jan 03, 2023 | Team Udayavani |

ಗುಳೇದಗುಡ್ಡ: ಕಳೇದ ಬಾರಿ ಕಳೆದುಕೊಂಡ ಬಾದಾಮಿ ಕ್ಷೇತ್ರವನ್ನು ಈ ಬಾರಿ ಪಡೆದುಕೊಳ್ಳಲಿದೆ. ನಾನು ಬಾದಾಮಿಯಿಂದ ಸ್ಪರ್ಧೆ ಮಾಡಬೇಕೆಂಬುದು ಪಕ್ಷದ ಹೈಕಮಾಂಡ್‌ ಗೆ ಬಿಟ್ಟಿದ್ದು, ಅಲ್ಲದೇ ಚುನಾವಣಾ ಸಮಯದಲ್ಲಿ ಏನು ಆಗುತ್ತದೆ ಎಂಬುದನ್ನು ಕಾಯ್ದು ನೋಡಬೇಕು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಪಟ್ಟಣದಲ್ಲಿ ನಡೆದ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನಾರ್ಧನ ರೆಡ್ಡಿಯವರು ಹೊಸ ಪಕ್ಷ ಕಟ್ಟಿರಬಹುದು. ಸ್ನೇಹವೇ ಬೇರೆ ರಾಜಕೀಯವೇ ಬೇರೆ. ನಮ್ಮದು ಭಾರತ ದೇಶ. ಜನರು ದೇಶ ಮತ್ತು ಮೋದಿಯವರನ್ನ ನೋಡಿ ಮತ ಹಾಕುತ್ತಾರೆ. ಬಿಜೆಪಿ ಎಂಬುದು ದೊಡ್ಡ ಶಕ್ತಿ. ಯಾರೋ ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ಬಂದರೇ ಅದು ವೈಯಕ್ತಿಕವಾದ ಪಕ್ಷಗಳಾಗುತ್ತವೆ. ಜನಾರ್ದನ ರೆಡ್ಡಿಯವರ ಪ್ರಾದೇಶಿಕ ಪಕ್ಷದಿಂದ ಬಿಜೆಪಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು “ಹೇಳಿದರು.

ಯಡಿಯೂರಪ್ಪನವರು, ಬೊಮ್ಮಾಯಿ ಅವರ ಅವಧಿಯಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ನಮ್ಮದೇ ಆದ ತತ್ವಸಿದ್ಧಾಂತಗಳಿವೆ. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬುದಕ್ಕಿಂತ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಸರಕಾರ ಅ ಕಾರಕ್ಕೆ ಬರಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next