Advertisement

ಕೋಟೆ ಮಟ್ಟು ನಾಗರಿಕರಿಗೆ ಕೋವಿಡ್ ಲಸಿಕೆ ಉತ್ಸವಕ್ಕೆ ತೆರಳಲು ಉಚಿತ ರಿಕ್ಷಾ ವ್ಯವಸ್ಥೆ

10:35 AM Apr 12, 2021 | Team Udayavani |

ಕಟಪಾಡಿ: ಕೋಟೆ ಮಟ್ಟುವಿನ ನಾಗರಿಕರಿಗೆ ಕೋವಿಡ್ 19 ಲಸಿಕೆ ಉತ್ಸವದ ಪ್ರಯುಕ್ತ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ಉಚಿತ ರಿಕ್ಷಾದ ವ್ಯವಸ್ಥೆಗೆ ಕಟಪಾಡಿ ಪೇಟೆಯಲ್ಲಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ.ಸುವರ್ಣ, ಬಿಜೆಪಿ ಕಾಪು ಮಂಡಲದ ಅಧ್ಯಕ್ಷ ಶ್ರೀಕಾಂತ್ ನಾಯಕ್, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಎ.11ರಂದು ಚಾಲನೆಯನ್ನು ನೀಡಿದರು.

Advertisement

ಎ.11ರಿಂದ ಎ.14ರ ವರೆಗೆ ಉಚಿತ ಕೋವಿಡ್ ಲಸಿಕೆ ಪಡೆದುಕೊಳ್ಳಲು ಸುಮಾರು 4 ರಿಂದ 5 ಕಿ.ಮೀ. ದೂರದ ಮೂಡಬೆಟ್ಟು ಆರೋಗ್ಯ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ಬಿಜೆಪಿ ಕಾಪು ಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು, ಕೋಟೆಮಟ್ಟು ಬಿಜೆಪಿ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಹರ್ಷಿತ್ ಪೂಜಾರಿ, ಕಟಪಾಡಿ ರಿಕ್ಷಾ ಚಾಲಕರ ಮಾಲಕರ ಸಂಘದ ಸಹಕಾರದೊಂದಿಗೆ 3 ರಿಕ್ಷಾಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೋಟೆ ಮಟ್ಟುವಿನ 45 ವರ್ಷದ ಮೇಲ್ಪಟ್ಟ ಎಲ್ಲಾ ನಾಗರಿಕರು ಈ ವ್ಯವಸ್ಥೆಯ ಸದುಪಯೋಗ ಪಡಿಸಿಕೊಂಡು ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಲಾಯಿತು.

ಕಟಪಾಡಿ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಪ್ರೇಮ್ ಕುಮಾರ್, ಏಣಗುಡ್ಡೆ ಶಕ್ತಿಕೇಂದ್ರದ ಅಧ್ಯಕ್ಷ ಸಂತೋಷ್ ಕುಮಾರ್, ಕೋಟೆ ಮಟ್ಟು ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಹರ್ಷಿತ್ ಪೂಜಾರಿ ರಿಕ್ಷಾ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಸತೀಶ್ ರಾವ್, ಸುಕೇಶ್ ಪಳ್ಳಿಗುಡ್ಡೆ ಅರುಣ್ ಕುಮಾರ್ ಕೋಟೆ, ಶ್ರೀನಿವಾಸ್, ಹರೀಶ್ ಮುನ್ನ, ಸಂಜಯ್ ಪೂಜಾರಿ, ರಂಜಿತ್, ಚಂದ್ರಹಾಸ ಜತ್ತನ್ನ ಮತ್ತಿತರರು ಸಹಕರಿಸಲಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next