Advertisement

ಉಚಿತ ಆರೋಗ್ಯ ಶಿಬಿರ

12:28 PM Feb 19, 2018 | |

ಬೆಂಗಳೂರು: ವಸಂತನಗರ ನಾಗರಿಕರ ಹಿತ ರಕ್ಷಣಾ ಸಮಿತಿ ವತಿಯಿಂದ ಭಾನುವಾರ ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜು ಆವರಣದಲ್ಲಿ ಆಯೊಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲಿಕೆ ಶಾಲೆಯ ನೂರಾರು ವಿದ್ಯಾರ್ಥಿಗಳು, ಕೊಳೆಗೇರಿ ನಿವಾಸಿಗಳು, ಹಿರಿಯ ನಾಗರಿಕರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 

Advertisement

ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮೂಳೆ ಸವೆತ, ಕಣ್ಣಿನ ಸಮಸ್ಯೆ, ದಂತ ಸಮಸ್ಯೆ ಸೇರಿದಂತೆ ಮಕ್ಕಳು ಹಾಗೂ ಹಿರಿಯರಿಗೆ ವೈದ್ಯರು ತಪಾಸಣೆ ನಡೆಸಿ ಸಂಬಂಧಿಸಿದ ಕಾಯಿಲೆಗಳಿಗೆ ಔಷಧ ವಿತರಿಸಿದರು. ಇದೇ ವೇಳೆ ಕಣ್ಣಿನ ಸಮಸ್ಯೆಯಿರುವವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. 
 

Advertisement

Udayavani is now on Telegram. Click here to join our channel and stay updated with the latest news.

Next