Advertisement

ಮೀನು ಮಾರಾಟ ಫೆಡರೇಶನ್‌ಗೆ ವಂಚನೆ: ದೂರು ದಾಖಲು 

09:00 AM Feb 23, 2018 | Team Udayavani |

ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ಗೆ ಲಕ್ಷಾಂತರ ರೂ. ವಂಚಿಸಿರುವ ಕುರಿತು ಮಂಜುನಾಥ ಖಾರ್ವಿ ಮತ್ತು ವಿಟuಲ ಖಾರ್ವಿ ವಿರುದ್ಧ ಮಂಗಳೂರು ನ್ಯಾಯಾಲಯದಲ್ಲಿ  ಪ್ರಕರಣ ದಾಖಲಾಗಿದೆ.

Advertisement

2014-15ನೇ ಸಾಲಿನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ಹಂಗಾರಕಟ್ಟೆ ಶಾಖೆ ಮೂಲಕ ಉಪ್ಪುಂದದ ವಿಟuಲ ಖಾರ್ವಿ ಅವರು ಸಿಗಡಿ ಖರೀದಿಸಿ 52,33,087.50 ರೂ. ಮತ್ತು ಮಂಜುನಾಥ್‌ ಖಾರ್ವಿ ಅವರು 2015-16ನೇ ಸಾಲಿನಲ್ಲಿ ಹಂಗಾರಕಟ್ಟೆ ಶಾಖೆ ಮೂಲಕ  ಸಿಗಡಿ ಖರೀದಿಸಿ 29,01,606.50 ರೂ. ಮತ್ತು ಸಿಗಡಿ ಖರೀದಿ ಬಗ್ಗೆ ಕಮಿಷನ್‌ 4,73,155.00 ರೂ. ಬಾಕಿ ಇಟ್ಟಿದ್ದರು.

ಬಾಕಿ ಮೊತ್ತಕ್ಕೆ ಸಂಬಂಧಿಸಿ ಸಂಸ್ಥೆಗೆ ಒಟ್ಟು 3 ಚೆಕ್‌ಗಳನ್ನು ನೀಡಿದ್ದು,  ಅವುಗಳು  ಬ್ಯಾಂಕ್‌ನಿಂದ ಅಮಾನ್ಯಗೊಂಡಿದ್ದವು. ಈ  ಬಗ್ಗೆ 5ನೇ ಹೆಚ್ಚುವರಿ ಜೆಎಂಎಫ್ಸಿ ಮಂಗಳೂರು ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next