Advertisement

ಹಗ್ಗದ ಮೂಲಕ ಜೈಲು ಗೋಡೆ ಹಾರಿ ಪರಾರಿಯಾದ 4 ಕೈದಿಗಳು

10:01 AM Jun 24, 2019 | Vishnu Das |

ಭೂಪಾಲ್‌ : ಮಧ್ಯಪ್ರದೇಶದ ನೀಮುಚ್‌ ಜಿಲ್ಲೆಯ ಕಾರಾಗೃಹದಿಂದ ನಾಲ್ವರು ಕೈದಿಗಳು ಪರಾರಿಯಾದ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದೆ.

Advertisement

ಜೈಲರ್‌ ಮತ್ತು ಸಿಬಂದಿಗಳಿಗೆ ತಿಳಿಯದಂತೆ ಜೈಲಿನ ಸರಳುಗಳನ್ನು ಕತ್ತರಿಸಿ ಹಗ್ಗವನ್ನು ಬಳಸಿಕೊಂಡು ಜೈಲಿನ ಗೋಡೆಗಳನ್ನು ಏರಿ ಪರಾರಿಯಾಗಿದ್ದಾರೆ.

ಪರಾರಿಯಾದ ಕೈದಿಗಳು ನರ್‌ಸಿಂಗ್‌ (20), ದುಬೆಲಾಲ್‌ (19), ಪಂಕಜ್‌(20), ಲೇಖ್‌ ರಾಮ್‌ (29) ಎನ್ನುವವರಾಗಿದ್ದಾರೆ.

ನಾಲ್ವರ ಪೈಕಿ ಓರ್ವ ಕೊಲೆಕೇಸ್‌ನಲ್ಲಿ ಶಿಕ್ಷೆಗೊಳಗಾಗಿದ್ದು,ಇನ್ನೋರ್ವ ರೇಪ್‌ ಕೇಸ್‌ನಲ್ಲಿ ಶಿಕ್ಷೆಗೊಳಗಾದವನು, ಇನ್ನಿಬ್ಬರು ಡ್ರಗ್ಸ್‌ ಜಾಲದಲ್ಲಿ ಸಿಕ್ಕಿ ಬಿದ್ದವರು.

ಘಟನೆ ನಡೆದ ಬೆನ್ನಲ್ಲೆ ಮೂವರು ಪೊಲೀಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ.

Advertisement

ಪರಾರಿಯಾದ ಕೈದಿಗಳ ಸುಳಿವು ನೀಡಿದವರಿಗೆ ತಲಾ 50 ಸಾವಿರ ಬಹುಮಾನವನ್ನು ಸರ್ಕಾರ ಘೋಷಿಸಿದೆ.

ಪ್ರಕರಣದ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶ ನೀಡಿದೆ. ನಾಲ್ವರಿಗಾಗಿ ಪೊಲೀಸರು ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next