Advertisement

ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ 

10:20 AM Mar 27, 2018 | Team Udayavani |

ವಿರಾಜಪೇಟೆ: ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ವಿಶೇಷ ಅನುದಾನದಿಂದ ಹಾಕತ್ತೂರು, ಪಾರಾಣೆ, ಚೆಯ್ಯಂಡಾಣೆ, ಕಕ್ಕಬ್ಬೆ, ಬಲ್ಲಮಾವಟಿ ಪಂಚಾಯ್ತಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದರು ಮತ್ತು ಅಭಿವೃದ್ಧಿ ಹೊಂದಿದೆ ರಸ್ತೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಕರ್ನಾಟಕ ಸಹಕಾರ ಮಹಾ ಮಂಡಳದ ನಿರ್ದೇಶಕರಾದ ಮನುಮುತ್ತಪ್ಪ, ಕೋಡಿರ ಪ್ರಸನ್ನ ಹಾಜರಿದ್ದರು.

Advertisement

ಮೇಕೇರಿ ಗ್ರಾ.ಪಂ ವ್ಯಾಪ್ತಿಯಲ್ಲೂ ಶಾಸಕರು ಅಭಿವೃದ್ಧಿ  ಕಾರ್ಯಕ್ಕೆ ಚಾಲನೆ ನೀಡಿದರು. ಮೇಕೇರಿ ಸಾರ್ವಜನಿಕ ರಸ್ತೆ ಅಭಿವೃದ್ಧಿœ 2 ಲಕ್ಷ ರೂ., ಸುಭಾಷ್‌ ನಗರದಿಂದ ಅರುವತ್ತೂಕ್ಲು ರಸ್ತೆ ಹಾಗೂ ಚೊಂಡಿರ ಕುಟುಂಬಸ್ಥರ ರಸ್ತೆ 3 ಲಕ್ಷ ರೂ., ತಾಳತ್‌ಮನೆ ಅರುವತ್ತೂಕ್ಲು ರಸ್ತೆ 4 ಲಕ್ಷ ರೂ., ಬಿಳಿಗೇರಿಯಿಂದ ಅರುವತ್ತೂಕ್ಲು ರಸ್ತೆ 3 ಲಕ್ಷ ರೂ., ಕಾನಡ್ಕ ಸೀತಾರಾಮ ಅವರ ಮನೆಗೆ ತೆರಳುವ ಕಾಂಕ್ರಿಟ್‌ ರಸ್ತೆ 2ಲಕ್ಷ ರೂ., ಮೇಕೇರಿ ಗ್ರಾ.ಪಂಯಿಂದ ಬಿಳಿಗೇರಿ ಹರಿಜನ ಕಾಲೋನಿ ಕಾಂಕ್ರಿಟ್‌ ರಸ್ತೆ 2 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಜಿ.ಪಂ ಅಧ್ಯಕ್ಷ‌ ಬಿ.ಎ.ಹರೀಶ್‌, ತಾ.ಪಂ ಸದಸ್ಯೆ  ಕುಮುದಾ ರಶ್ಮಿ, ಗ್ರಾ.ಪಂ ಅಧ್ಯಕ್ಷ ಜಯಂತಿ, ಉಪಾಧ್ಯಕ್ಷ‌ ಕೆ.ಎಸ್‌.ಭೀಮಯ್ಯ, ಸದಸ್ಯರಾದ ಅರ್ಪಿತಾ ಸಂಧ್ಯಾ, ಸಿ.ಎ. ಕಾರ್ಯಪ್ಪ, ನಾಚಪ್ಪ, ಪೂಜಾರಿರ ರಕ್ಷಿತ್‌, ವಾಣಿ, ಪುಷ್ಪಾ, ಮಾಜಿ ಅಧ್ಯಕ್ಷ ಕಾಂತ ಕಾವೇರಪ್ಪ, ಸಹಕಾರ‌ ಮಹಾಮಂಡಳದ ನಿರ್ದೇಶಕ‌ ಮನುಮುತ್ತಪ್ಪ ಹಾಗೂ ಕೋಡಿರ ಪ್ರಸನ್ನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next